Wednesday, July 25, 2007

Amazing Biker

I came across this amazing video while searching for the original video of the famous 'Dhoom' title song (this song is inspired by Jesse Cook's 'Mario takes a walk')... The background music in this video is the song I was searching for... Have a look at it:

ಕೃತಿಚೌರ್ಯ...

’ಲಂಕೆಶ್ ಪತ್ರಿಕೆ’ ಚಿತ್ರದ "ನೋಡ್ಕೊಂಡ್ ಬಾರೊ ಅಂದ್ರೆ" ಹಾಡು ಕೇಳಿದ್ದೀರ ಅಲ್ವ? ಚೆನ್ನಾಗಿದೆ ಅಲ್ವ? ಆ ಹಾಡು ಅದಕ್ಕೆ ಸಂಗೀತ ಕೊಟ್ಟ Babji-Sandeepನ ಸ್ವಂತದ್ದು ಅಂದುಕೊಂಡಿದ್ದೀರ? ಅಲ್ವೇಅಲ್ಲ. ವೀಡಿಯೊ ಸಮೇತ ಒಂದು ಹಾಡು ಕೇಳಿಸ್ತಿನಿ, ಕೇಳಿ-ನೋಡಿ..



ನಮ್ಮವರ ಹಾಡು ಕೇಳಿ ಇಲ್ಲಿ.

ಈಗ ಹೇಳಿ. :)
ಆ ಹಾಡು, ಟರ್ಕಿಯ ಹಾಡುಗಾರ ಟರ್ಕನ್ (Tarkan) ಅನ್ನೋಂದು. ಅದನ್ನ ಎತ್ತಿರೋದು ಅವನ 'Olurum Sana' ಅನ್ನೊ ಆಲ್ಬಂ ನಿಂದ.

ನಮ್ಮವರೊಬ್ಬರೇ ಅಲ್ಲ, ಹಿಂದಿಯ ಭಯಂಕರ ಹಿಟ್ ಆಗಿರೋ ಪ್ರೀತಮ್ ಕೂಡ. ಪ್ರೀತಮ್ ಸಂಗೀತ ಕೊಟ್ಟಿರೋ ’ಧೂಂ’ ಚಿತ್ರ ಗೊತ್ತಲ್ವ? ಅದರಲ್ಲಿರೊ ಹಾಡು ’ದಿಲ್ಬರ್ ಶಿಕಿದುಂ ಶಿಕಿದುಂ’ ಕೂಡ ಟರ್ಕನ್ ನದ್ದೇ. ಈದು ನೋಡಿ-ಕೇಳಿ:



ಈಗ Dhoom ಚಿತ್ರದ್ದು:


’ನಾನು ಸ್ವಂತವಾಗಿ compose ಮಾಡಿದ್ದಲ್ಲ’ ಅಂತ ಹೇಳೋಕೆ ನಮ್ಮವರಿಗೆ ಕಷ್ಟನ? ಇಲ್ಲಾಂದ್ರೆ ಯಾಕೆ original artistಗೆ ಸಿಗಬೇಕಾದ fame ಇವರಿಗೆ? ತಮ್ಮ albumsನಲ್ಲಿ ಮೂಲ ಎಲ್ಲಿಯದು ಅಂತ ಬರೆದರೆ ಇಲ್ಲಿಗೆ ಆಗೊಹಾಗೆ ಬದಲಿಸಿದ್ದಕ್ಕೆ ನಾವೂ ಕೂಡ ಖುಷಿಯಿಂದನೇ ಕೆಳ್ತಿವಿ ಮತ್ತೆ ಅವರ ಸಾಚಾತನವನ್ನ ಗೌರವಿಸುತ್ತೀವಿ ಕೂಡ.

ಹೇಗೇ ಬೇಕಾದಷ್ಟು ಹಾಡುಗಳನ್ನ ಬೇಕಾದಷ್ಟು ಜನ copy ಮಾಡಿದ್ದಾರೆ. ಇಂತಹ ಕೃತಿ ಚೌರ್ಯಗಳನ್ನೆಲ್ಲಾ ಒಂದು website ಪಟ್ಟಿ ಮಾಡಿದೆ. ಈ ವೆಬ್ಸೈಟ್ ನೋಡಿ ಗೊತ್ತಾಗುತ್ತೆ.

Monday, July 23, 2007

All new Indian sports bike - Pulsar 220

ಏನ್ರಿ ಇದು.. Super & Chetak ಅಂತ ಸ್ಕೂಟರ್ ಮಾರ್ತಿದ್ದವರು, ಈಗ super bikes ಬಿಡ್ತಿದ್ದಾರೆ. :) It is good indeed. I like the way Bajaj has positioned itself in the Indian Bike industry. Not only Bajaj, TVS too is releasing good bikes. It is nice to feel they are our own Indian great bikes. We never had bikes with more than 100cc a decade ago with affordable price, though there were Bullets, Road Kings, and Yamaha 350s... Cruiser bikes and sports bikes are in thing now on India roads.. More of Avenger, Enticers.. But as Bajaj has introduced new more power sport bikes: Pulsar 200 and Pulsar 220 with DTS-Fi technology. Pulsar 220 is awesome! :) It is a power-well, I should say on Indian roads..



It looks great... And has great features too! But there is a 5-6 months waiting time, I believe. It costs around 91 grand in Bangalore.. Whatever, it is a bike to have man now!! If you are a sports bike fan, you should go for it.. :)

To know more about technical and other details, visit their website

I've been bitten...

ನಾನು carಗೆ upgrade ಮಾಡಿಕೊಂಡ ಮೇಲೆ bike ನ ಓಡಿಸಿಯೇ ಇಲ್ಲ. ಆದ್ರೆ ಈಗ ಯಾಕೋ ಮತ್ತೆ bike ಓಡಿಸೊ ಹುಚ್ಚು ಬಂದಿದೆ.. ಆದರಲ್ಲೂ Curiser Bikeದು. Frankly this is after seeing people in US. They go around on Harley Davidson, cruising all along in valleys.. Now I'm crazy about it.. I've to admit it. :)

ಹಾಗೇ ಯಾವುದು ಒಳ್ಳೇದು ಅಂತ ಯೋಚಿಸಿದ್ರೆ, ನಮ್ಮಲ್ಲಿ ಇನ್ನೂ cruising bug ಎಲ್ಲಾರಿಗೂ ಹಿಡಿದಿಲ್ಲ. ಹಿಡಿದಿರೋದು ಮಾತ್ರ ಸ್ವಲ್ಪ Bullet ಇರೋರಿಗೆ. ಈಗೀಗ ಎಲ್ಲಾರಿಗೂ cruising ಹುಳ ಕಡಿತಾಇದೆ ಅನ್ನಿಸುತ್ತೆ... ಅದಕ್ಕೆ ಈಗ Bajaj Avenger ಚೆನ್ನಾಗಿ ಓಡುತ್ತಿದೆಯಂತೆ.. I like this bike. Though Bullet has more power to be a cruiser, not everyone can afford it for its high (??) maintenance costs. ಎಲ್ಲಾವುದರಲ್ಲೂ Avenger ಸೈ ಅನ್ನಿಸಿಕೊಂಡಿದೆ.. ಆದನ್ನೇ ನಾನೂ ತಗೊಳೊ ಯೋಚನಯಲ್ಲಿದ್ದೀನಿ.


ಈಗ bile ತಗೊಂಡು ಓಡಡ್ತಿನಿ ಅಂದ್ರೆ ನಂಗೆ ತುಂಬಾಜನ ನಿಜವಾಗ್ಲೂ ಹುಚ್ಚು ಅಂತಾರೆ.. ಆದ್ರೆ ನಾನೇ ಹೇಳಿದಂಗೆ, ನನಗೀಗ ಅದರ ಹುಚ್ಚು ಹಿಡಿದಿದೆ... :) ನಾನಾಗ್ಲೆ ಅದರಮೇಲೆ ಹೋಗ್ತಿರೋಹಾಗೆ ಕನಸು ಕಾಣ್ತಿದ್ದೀನಿ.. ನಾನು (ಹಿಂದೆ ನನ್ನ better half), ಜೊತೆ ಯಲ್ಲಿ ನನ್ನ friends ಜೊತೆಯಲ್ಲಿ ದೂರ ಹೋಗ್ತಿದ್ರೆ... ಅಹಾ...!!!! Wait Sree, you are not yet there!! ;-)

Friday, July 20, 2007

(Americaದ) beggars! - Part II

ನನ್ನ "America ದಲ್ಲಿ ಕಸ??!!! ಆಯ್ಯಯ್ಯೊ beggars!!!" ಬಗ್ಗೆ ಓದಿದ ನನ್ನ ಒಬ್ಬ ಸ್ನೆಹಿತ ನನಗೆ e-mailನಲ್ಲಿ (I don't know why he didn't write here) ಹೆಳ್ದ:

’ಆಮೇರಿಕದಲ್ಲಿ, ಅದರಲ್ಲೂ Californiaದಲ್ಲಿ ಸರ್ಕಾರ ಮನೆಇಲ್ಲದವರನ್ನು ದುಡ್ಡುಕೊಟ್ಟು ನೋಡಿಕೊಳ್ಳುತ್ತೆ. ಆದಕ್ಕೇ ತುಂಬಾ ಭಿಕ್ಷುಕರನ್ನು ಅಂಥಾ ದೊಡ್ಡ ಊರುಗಳಲ್ಲಿ ನೋಡಬಹುದು’ ಅಂತ. ಸರಿ ಸ್ವಾಮಿ. ಮನೆ ಇಲ್ಲದವರಿಗೆ ಸರ್ಕಾರ ನೋಡಿಕೊಳ್ಳೋದು ತುಂಬ ಒಳ್ಳೆಯ ವಿಷ್ಯ. ಆದರೆ, ಅಲ್ಲಿನ ಜನ ಬೇರೆ ದೇಶ ಅಥವಾ ಊರುಗಳಲ್ಲಿ ಭಿಕ್ಷುಕರನ್ನು/ಮನೆಇಲ್ಲದವರನ್ನು ತೀರ ಕಡೆಯಾಗಿ ನೋಡೊದ್ಯಾಕೆ? ಅವರ ದೇಶದಲ್ಲೇನು ಇಲ್ವೇ ಇಲ್ವೆ? Photo ತೆಕ್ಕೊಳ್ಳೋದೇನು, India ಅಂದ್ರೆ ಬಡ ದೇಶ ಅಂತ ಮಾತಾಡೋದೇನು... ಮನುಷ್ಯ ಅಂದಮೇಲೆ ಎಲ್ಲರಹತ್ರ ಚೆನ್ನಾಗೇ ದುಡ್ಡಿರತ್ತೆ ಅಂತ ಹೇಳೊಕೆ ಸಾಧ್ಯಾನ? ನಾನೂ ಒಪ್ಪುತ್ತೀನಿ, ಇಲ್ಲಿ ಸ್ವಲ್ಪ ಜಾಸ್ತಿನೇ ಇರಬಹುದು. It is easy money!!

Jefferson Streetನಲ್ಲಿ ಒಬ್ಬ ಕುರುಚಲು ಗಡ್ಡಧಾರಿ ಒಂದು ರಟ್ಟು ಹಿಡಿದು ಕೂತಿದ್ದ - which read: "No lies, it is all for a bottle of beer!" :)

ನಾನೂ ಕೂಡ ಭಿಕ್ಷೆಬೇಡುವುದನ್ನ encourage ಮಾಡೊಲ್ಲ. ನೀವು ಬೆಂಗಳೂರಿನ ಹಲವಾರು intersectionಗಳಲ್ಲಿ ಸಿಗ್ನಲ್ಗಾಗಿ ಕಾಯೋವಾಗ ಅಲ್ಲಿನ ಕೆಲವು ’well to do' (I remember a couple of TOI articles about rich beggars :) ) ಭಿಕ್ಷುಕರನ್ನ ನೋಡಿರಬಹುದು. ಬೇಡುವಾಗ ಕುಂಟುವ ಶೈಲೀಲಿ ನಿಮ್ಮ ಹತ್ರ ರೋಡಿನ ಮಧ್ಯ ಬಂದವರು green signal ಬಂದ ತಕ್ಷಣ ಎಷ್ಟು ಬೇಗ ಓಡುತ್ತಾರೆ ಅಂತ. ಇಂಥವರಿಗೆ ನಮ್ಮ ಸರ್ಕಾರನೂ ದುಡ್ಡು ಕೊಡೋಕೆ ಶುರುಮಾಡಿದ್ರೆ, ದೇವರೇ ಗತಿ. ಆದ್ರೆ, ಇಂಥವರಿಗೆ (ಬಡಬಗ್ಗರಿಗೆ) ನಮ್ಮ ಸರ್ಕಾರ ಕೂಡ ತುಂಬಾ ಸಹಾಯ ಮಾಡಿದೆ ಅಂತ ಕೇಳಿದ್ದೀನಿ - ಅದರ ಬಗ್ಗೆ ತುಂಬ ಗೊತ್ತಿಲ್ಲ ಹಾಗಾಗಿ comment ಮಾಡೋದು ಬೇಡ. ಆದ್ರೆ ಯಾರಿಗೆ ಬೇಡ ಸ್ವಾಮಿ ಈ ಸುಲಭದ ದುಡ್ಡು? ಕೆಲವರು ತಮ್ಮ ಸ್ವಾಭಿಮಾನ ಬಿಟ್ಟು ಬೇರೆ ದಾರಿಯೇ ಇಲ್ಲದೆ ಭಿಕ್ಷೆ ಬೇಡುತ್ತಿರಬಹುದು. ನಿಜವಾದ ನಿರ್ಗತಿಕರನ್ನು ಕಂಡುಹಿಡಿಯೋದು ಹೇಗೆ? ಬೇರೆಯವರಿಂದ ನಿಜವಾದ ಬಡವರಿಗೂ ಸಹಾಯ ಸಿಗೋದು ಕಡಿಮೆಯಾಗಿರಬಹುದು.. ಅಲ್ವೆ?

Thursday, June 21, 2007

America ದಲ್ಲಿ ಕಸ??!!! ಆಯ್ಯಯ್ಯೊ beggars!!!

ಆಯ್ಯೊ!! ಇದು ಸಾಧ್ಯನೇಂನ್ರಿ ಅಂತಿರಾ?? ಏಲ್ಲಾ ಸಾಧ್ಯ ಸ್ವಾಮಿ. Most of the times when you think of America what comes to your mind is that it is very clean, advanced, standard of living is very high etc. ಆದ್ರೆ dirty ಜನಾಂಗ ಇಲ್ಲ ಅಂತಲ್ಲ.. poverty ಇಲ್ವೇ ಇಲ್ಲ ಅಂತಲ್ಲ.

ಮೊನ್ನೆ famous San Franciscoಗೆ ಹೋಗಿದ್ವಿ. Civic Centre ಹತ್ರ ಇದ್ದಾಗ ಅಲ್ಲಿ ನೋಡಿದ ’sophisticated' ಭಿಕ್ಷುಕರನ್ನ ನೋಡಿ ಕೋಪ ಬಂದಿದ್ದು Indiaಕ್ಕೆ ಬಂದು Americaನ ಮನಸ್ಸಿಗೆ ಬಂದಂಗೆ ಹೊಗಳಿ Indianನ ತೆಗಳೊ ಭಾರತೀಯರ ಮೇಲೆ. ಅಲ್ಲಿ ಹಾಗೆ ಅಲ್ಲಿ ಹೀಗೆ ಅಂತ ಹೇಳೊ Indian, ಭಾರತಕ್ಕೆ ಬಂದಾಗ ಅವರು Americaದಲ್ಲಿದ್ದಾಗ ಹೇಗೆ behave ಮಾಡ್ತಿದ್ರೊ ಹಾಗೆ ಯಾಕೆ ಇರಲ್ಲ ಅನ್ನೋದೆ ನಂಗೆ ಯಕ್ಷಪ್ರಶ್ನೆ. Indiaಕ್ಕೆ ಬಂದು Americaನ ಹೊಗಳೋದಷ್ಟೆ ಗೊತ್ತು ಅವರಿಗೆ - ಅಲ್ಲಿ ಯಾವುದು ಒಳ್ಳೇದಿದೆ ಅದನ್ನ implement ಮಾಡಕ್ಕೆ ಏನು ಸಹಾಯ ಮಾಡ್ತಿದ್ದಾರೆ? ಉದಾ: Americaದಲ್ಲಿದ್ದಾಗ ಸರಿಯಾಗಿ lane ನಲ್ಲಿ ಹೊಗ್ತಾರೆ. ಅದೇ ವಾಪಸ್ ಊರಿಗೆ ಬಂದಾಗ ಹೆಂಗೇಂದ್ರೆ ಹಂಗೆ drive ಮಾಡ್ತಾರೆ. ದಾರಿಲಿ ಉಗೀತಾರೆ.. ಕಸ ಎಲ್ಲಂದ್ರಲ್ಲಿ ಹಾಕ್ತಾರೆ.. ಅದ್ಯಾಕೆ ಸ್ವಾಮಿ? ಅಲ್ಲಿ ತಪ್ಪು ಮಾಡಿದ್ರೆ ’ticket' ಅಂತ ನೂರಾರು ಡಾಲರ್ ದಂಡ ಕೊಡೊದು ತಪ್ಪಿಸಿಕೊಳ್ಳೊಕೆ ಸರಿಯಾಗಿರ್ತಾರೆ.. ಆದೆ ನಮ್ಮ ಊರಲ್ಲಿ ದಂಡ ಹಾಕಿದ್ರೆ ಅದರಲ್ಲೂ ಪೋಲೀಸ್ ಮಾಮನ್ಹತ್ರ ಚೌಕಾಸಿ ಮಾಡಿ ಅವರನ್ನೂ ದಾರಿ ತಪ್ಪಿಸ್ತಾರೆ. ಇಂಥವರ ರುಚಿ ತಿಂದು ನಮ್ಮ ಪೋಲೀಸ್ ಜನಾಂಗ ಅದನ್ನೇ continueಮಾಡಿ ಎಲ್ಲರಹತ್ರ ಬಯ್ಯಿಸ್ಕೊತಾರೆ. ಅದಿರ್ಲಿ. ವಾಪಸ್ ನಮ್ಮ topicಗೆ ಬರಣ.

ಈ photoನೋಡಿ. ನಿಜವಾಗಿ begಮಾಡುತ್ತಿರೊದನ್ನ ತೆಗೆದು postಮಾಡೊಣ ಅಂಸಿತ್ತು ಫಿರಂಗಿಯವರು ನಮ್ಮ ಊರಲ್ಲಿ ಭಿಕ್ಷುಕರ photoತಗೊಳೊ ಥರ. ಆದರೆ ಅವರಿಗೆ ಹಿಂಸೆ ಆಗಬಹುದು ಅಂತ ತೆಗಿಲಿಲ್ಲ. ಏನೇ ಆಗ್ಲಿ ಅವರು ’ಫಿರಂಗಿ’ಗಳೇ ಅಲ್ವ? :)



ಇಂಥದ್ದು San Francisco ನಂಥ ಜಾಗದಲ್ಲಿ ತುಂಬಾನೆ ಸಿಗತ್ತೆ. ಒಬ್ಬ binನಲ್ಲಿದ್ದ containers ಹುಡುಕಿ ಹುಡುಕಿ ಏನಾದ್ರು ಉಳಿದಿದ್ರೆ ಅದನ್ನ ಕುಡಿತಿದ್ದ. ಅದೂ ಒಂದು ಹನೀಕೂಡ ಬಿಡದಂಗೆ. ’ಒಂದು quarter (25 cents) ಕೊಡಿ’ ಅಂತ ಕೇಳೊರಿಗೆ ಲೆಕ್ಕನೇ ಇಲ್ಲ. ನನ್ನ ಸ್ನೇಹಿತ ಹೇಳಿದ - ನಾನು ಮುಂಚೆ ಇದ್ದ ಕಡೆ ತುಂಬಾ ಬಿಳಿಯರು ಭಿಕ್ಷುಕರನ್ನ ನೋಡ್ತಿದ್ದೆ, ಅದೇನೂ ದೊಡ್ಡ ವಿಷಯಅಲ್ಲ - ಅಂತ.

ಇನ್ನು ಕಸಕ್ಕೆ ಬರಣ. ಈ photo ನೋಡಿ.



ಇದು ಯಾವ ಜಾಗ ಅಂತಿರ? ಜಪಾನ್ ಟೌನ್ ಅಂತ ಇದೆ. ಆಲ್ಲಿ ’peace pagoda' tower ಇಟ್ಟಿದ್ದಾರೆ - ಜಪಾನ್ ದೇಶದವರು ಕೊಟ್ಟಿದ್ದಂತೆ. ಈ ಪಗೋಡ ನೊಡಕ್ಕೆ ಮೆಟ್ಟಿಲು ಹತ್ತೋ ಜಾಗದಲ್ಲಿದ್ದ ದೄಶ್ಯ. ಇಂಥವು ಕೂಡ ಬೇಕಾದಷ್ಟು.

PS: You must be thinking didn't I get anything good to write about America. Yes, the place where I stayed - Roseville, CA. It is a nice place, well organized, though it is not as big as LA, SF or NY. If I get time, I will write about that as well. :)

Friday, January 19, 2007

Better use of barricades!

ಕಳೆದ ಮಂಗಳವಾರ St. Marks Roadನಲ್ಲಿ ಊಟ ಮುಗಿಸಿ ವಾಪಸ್ officeಗೆ ಹೋಗುವಾಗ ಒಂದು ಒಳ್ಳೆ ದೃಶ್ಯ ನೊಡಿದೆ! ನಾನು ಮತ್ತು ನನ್ನ ಸಹೋದ್ಯೊಗಿ ತುಂಬಾ ಚಕಿತರಾದ್ವಿ. ಆದ್ರೂ curiosಆಗಿ ಅದರ photo ತಗೊಂಡ್ವಿ. ಆಗ ನನ್ನಹತ್ರ ಇದ್ದ camera ಅಂದ್ರೆ ನನ್ನ mobileದು ಮಾತ್ರ. ನೋಡಿ ಹೇಗಿದೆ ಅಂತ. ನಿಮಗೇನದರೂ ಇಂಥ ಸುಲಭ ಉಪಯೋಗದ ಉಪಾಯ ಹೊಳೆದಿತ್ತ?? :)



ನಮ್ಮ ಜನಕ್ಕೆ ಸ್ವಲ್ಪ ಅವಕಾಶ (ಜಾಗ) ಸಿಕ್ಕಿದರೂ ಅದನ್ನ ಚೆನ್ನಾಗಿ ಉಪಯೋಗಿಸಿಕೊಳ್ಳೂಉತ್ತಾರೆ ಅನ್ನೊದಕ್ಕೆ ಇದೊಂದು ಉದಾಹರಣೆ. ಇಲ್ಲಿ barricades ಹಾಕಿದ್ದು ವಾಹನ ಸಂಚಾರ ಸುಗಮವಾಗ್ಲಿ ಅಂತ. ಆದ್ರೆ ಅದರ ಉಪಯೋಗ ಇನ್ನೂ ಸ್ವಲ್ಪ ಜಾಸ್ತಿನೆ ಅಯ್ತು ಇಲ್ಲಿ. ಆದ್ರೂ ಇಂಥ ಮುಖ್ಯ ರಸ್ತೆಲಿ ಹೀಗೆ ಮಾಡೊಕೆ ಅವಕಾಶ ಕೊಟ್ಟಿದ್ದು ಯಾರು? ಎಲ್ಲಾವುದಕ್ಕೂ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ' ಅನ್ನೊ ನಮ್ಮ ಭಾರತೀಯ ಬುದ್ಧಿನೆ?

Sunday, November 12, 2006

ಬೆಂಗಳೂರಿನ ಪುಸ್ತಕ ಜಾತ್ರೆ

ಸುಮಾರು ಎರಡು ವರ್ಷಗಳ ನಂತರ ನಿನ್ನೆ ಶನಿವಾರ ನಾನು B.M.T.C. busನಲ್ಲಿ ಹೊರಟೆ. ಬೆಂಗಳೂರಿನ traffic problemಗಳಿಗೆ ಒಂದು ದಿನ ನನ್ನ ಕಾರು ಹೊರತಾಗಿದ್ದರೆ ಸ್ವಲ್ಪ ಮಟ್ಟಿಗಾದರೂ ಸಹಾಯವಾಗಬಹುದೇನೊ ಅನ್ನೊ ಒಂದೆ ಒಂದು ಆಸೆ ಹೊತ್ತಿದ್ದೆ. ಒಂದುಥರ ಅನುಭವ ಚೆನ್ನಗಿಯೇ ಇತ್ತು. ನಾನು ಬನ್ನೆರುಘಟ್ಟ ರಸ್ತೆಯಿಂದ ಮೇಖ್ರಿ ಸರ್ಕಲ್ ನಲ್ಲಿ ನಡೆಯುತ್ತಿದ್ದ book fairಗೆ ಹೋಗಬೆಕಿತ್ತು. ಬೆಳಗ್ಗೆ ದಿನಪತ್ರಿಕೆಯಲ್ಲಿ ಅದರ ಜಾಹಿರಾತು ನೋಡಿದಮೇಲೆ ತುಂಬಾ ಆಸೆಯಾಗಿತ್ತು. ನನಗೆ ಸ್ವಲ್ಪ ಪುಸ್ತಕಗಳ ಬಗ್ಗೆ ಆಸಕ್ತಿಯಿದೆ. ಆದರಲ್ಲೂ ಈಚೆಗೆ ಸ್ವಲ್ಪ ಜಾಸ್ತಿಯಾಗಿದೆ. ಸಿಕ್ಕ ಪುಸ್ತಕಗಳನ್ನೆಲ್ಲಾ ಕೊಂಡು ತರುತ್ತಿರುತ್ತೆನೆ... ನನ್ನ ಅರ್ಧಾಂಗಿ 'ಬರೇ ತರ್ತಿರ, ಅದನ್ನಲ್ಲ ಯಾವಾಗ ಓದುತ್ತಿರ; ನಿಮಗೆ ಸಮಯಯೆಲ್ಲಿದೆ? ಮೊದಲು ತಂದಿರೊ ಎಲ್ಲಾ ಪುಸ್ತಕ ಓದಿ ಮುಗಿಸಿ' ಅಂತ ರೇಗಿಸುತ್ತಿರುತ್ತಾಳೆ. ಆದರೂ ಪುಸ್ತಕ ತರೋಬುದ್ಧಿ ಹೋಗಿಲ್ಲ :(

ಸಂಜೆ ನಾಲ್ಕು ಗಂಟೆಗೆ ಮನೆಬಿಟ್ಟವ ನಾನು ಪುಸ್ತಕ ಜಾತ್ರೆ ನಡೀತಿದ್ದ ಜಾಗ ತಲುಪಿದಾಗ 5.50.. ಸ್ವಲ್ಪ ಸುದೀರ್ಘ ಪಯಣ.. ಒಂದೆ ಊರಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ... :) ಅದೆ ರಾತ್ರಿ ಮಾತ್ರ ಒಂದೇ ಗಂಟೆಯಲ್ಲಿ ಮನೆ ತಲುಪಿದ್ದೆ.

ಪುಸ್ತಕ ಜಾತ್ರೆ ಏನು ಸೊಗಸಾಗಿತ್ತು ಮಾರಾಯರೆ!!... ಬಹಳ ವರ್ಷಗಳ ನಂತರ ಅಷ್ಟೊಂದು ಪುಸ್ತಕಗಳನ್ನ ಒಂದೇ ಸೂರಿನಡಿ ನೊಡಿದ್ದು... ಕನ್ನಡ, ಇಂಗ್ಲಿಷ್, ತಮಿಳು, ಹಿಂದಿ ಎಲ್ಲಾ ಭಾಷೆಯದ್ದೂ ಅಂಗಡಿಗಳು ಇತ್ತು... ಆದರಲ್ಲೂ ನಾನು ನೋಡಲು ಹೋಗಿದ್ದು ಕನ್ನಡ ಪುಸ್ತಕಗಳನ್ನ.. ನಿಜವಾಗಲೂ ಸಂತೋಷವಾಯ್ತು, ಸ್ವಾಮಿ. ನನಗೆ ತಿಳಿದಿದ್ದ ಎಲ್ಲಾ ಪ್ರಕಾಷಕರದೂ ಒಂದೊಂದು ಅಂಗಡಿ ಇತ್ತು. ಬೇಕಾದಷ್ಟು ಕನ್ನಡ ಪುಸ್ತಕಗಳು ಇದ್ದವು. ಆಷ್ಟೊಂದು ಪುಸ್ತಕಗಳನ್ನ ನೋಡಿಯೇ ನನ್ನ ಹೊಟ್ಟೆ ತುಂಬಿತ್ತು. ಎಲಾ ಅಂಗಡಿಗಳನ್ನು ಸಾಧ್ಯವಾದಷ್ಟು scanಮಾಡಿದೆ. ತಕ್ಕಷ್ಟು ಕೊಂಡೆ. ಎಲ್ಲಾ ನೋಡುವಾಗ ನನ್ನ ಹಾಫ಼್ ಶರ್ಟ್ (ಅರ್ಥಾತ್ ಪತ್ನಿ) ನನ್ನ ಜೊತೆಇಲ್ಲವಲ್ಲ ಅನ್ನಿಸಿತು. ಇಷ್ಟೊಂದು ಕನ್ನಡ ಪುಸ್ತಕಗಳನ್ನೆಲ್ಲಾ ತೊರಿಸುವ ನನ್ನ ಹಂಬಲ ಆಗ ನನ್ನಲ್ಲಿಯೇ ಉಳೀತು.. ಆಗ ನನ್ನ ಸ್ನೆಹಿತ, cousin ಮತ್ತು ನನ್ನ ಸೊದರ ಮಾವನವರನ್ನೂ ತುಂಬಾ ಸ್ಮರಿಸಿದೆ. ಆವರೆಲ್ಲರಿಗೂ ಸ್ವಲ್ಪ ಪುಸ್ತಕಗಳ ಹುಚ್ಚು ಇದೆ. ಆವರಷ್ಟೆ ಅಲ್ಲ, ನನ್ನಮ್ಮನಿಗೂ ಇದೆ. ಆದೆ ನನಗೂ ಪುಸ್ತಕದ ಹುಚ್ಚುಹಿಡಿಸಿತೊ ಏನೊ! ಚಿಕ್ಕಂದಿನಿಂದನೊ ಅಮ್ಮ ಓದುತ್ತಿದ್ದುದು ನೊಡಿ ಜೊತೆಗೆ ನನ್ನ ಕೆಲವು ಸಹವರ್ತಿಗಳ ಒಡನಾಟ ನನಗೆ ಕನ್ನಡ ಪುಸ್ತಕಗಳ ಗೀಳನ್ನ ಇನ್ನೂ ಉಳಿಸಿದೆ.

ಮೊನ್ನೆ autoನಲ್ಲಿ ಬರುವಾಗ ನಮ್ಮ ಒಬ್ಬ ಸಹೃದಯಿ ಚಾಲಕ ಕನ್ನಡದ ಸ್ಥಿತಿಗತಿಗಳ ಬಗ್ಗೆ ಚರ್ಚೆ ಶುರುಮಾಡಿದ. ನಾನೂ ಕನ್ನಡದವನೇ ಆದ್ದರಿಂದ ಮಾತನಾಡಲು ಶುರುಮಾಡಿದೆ. 'ಬೇರೆಯವರನ್ನು ನೋಡಿ ಸರ್, ನಾವೆಲ್ಲ ಅವರ ಊರಿಗೆ ಹೋದ್ರೆ, ನಾವು ಅವರ ಭಾಷೆನೆ ಕಲಿತು ಮಾತಾಡೊಹಾಗೆ ಮಾಡುತ್ತರೆ. ಇಲ್ಲಿ ಮಾತ್ರ ಅವರೆಲ್ಲ ಯಾಕೆ ನಮ್ಮ ಭಾಷೆಕಲಿಯಲ್ಲ?' ಅಂತೆಲ್ಲಾ ಎಲ್ಲರೂ ಮಾತಾಡೊದೆಲ್ಲ ನಾವು ಮಾತಾಡಿದೆವು. ಹೌದು, ಸ್ವಾಮಿ. ನಾವು ಮೊದಲು, ಸರಿಹೋಗಬೇಕು. ಬೇರೆಯವರು ಇಲ್ಲಿ ನಮ್ಮ ಭಾಷೆ ಮಾತಡುತ್ತಿಲ್ಲ ಅಂತಷ್ಟೆ ನಾವು ಹೇಳುತ್ತಿರುತ್ತೆವೆ, ಆದರೆ, ನಮ್ಮಲ್ಲಿ ಎಷ್ಟು ಜನ ಕನ್ನಡೇತರ ಭಷೆಯಲ್ಲಿ ಮಾತಾಡಿದಾಗ, ಕನ್ನಡದಲ್ಲಿ ಉತ್ತರಕೊಟ್ಟಿದ್ದೆವೆ? ಅಥವಾ ಕನ್ನಡವನ್ನು ಅವರೆಲ್ಲಾ ಕಲಿಯಬೇಕು ಅನ್ನಿಸೋಹಾಗೆ ಅವರಿಗೆ ತಿಳಿಸಿದ್ದೆವೆ? ಆದೂ ಮುಖ್ಯವಲ್ಲವೆ, ಸ್ವಾಮಿ? ನಾವು ಯಾವಾಗಲೂ ಬೇರೆಯವರು ಕಲೀತಿಲ್ಲ ಅಂತಷ್ಟೇ ಹೇಳಿದರೆ ಸಾಕಾ??
ಒಂದು ಅಂಗಡಿಯಲ್ಲಿ englishಏ ಜೀವಾಳವೇನೊ ಅನ್ನೊಹಾಗೆ ಕಾಣುತ್ತಿದ್ದ ಒಂದಿಬ್ಬರು ಕನ್ನಡ ಪುಸ್ತಕಗಳನ್ನು ವಿಚಾರಿಸುತ್ತಿದ್ದುದ್ದು ತುಂಬಾ ಖುಶಿ ತಂತು. ಆಗ ಅನ್ನಿಸಿತು, 'ಕನ್ನಡವೇ ಸತ್ಯಾ??' ಅನ್ನೊ ಕೆಲವರ ಕೊಂಕಿನ ಪ್ರಶ್ನೆಗೆ ಉತ್ತರ ನಮ್ಮ ಹತ್ತಿರ ಇದೆ, ಬರೆಯ ಹಾಸ್ಯವಲ್ಲ, ಕನ್ನಡ ಇನ್ನೂ ಸತ್ತಿಲ್ಲ, ಎಲ್ಲರಲ್ಲೂ ತುಂಬಿದೆ ಅಂತ. ಅವರು ಎಲ್ಲರೂ ಕಷ್ಟ ಅಂತ ಬಿಡೊ ಭೈರಪ್ಪನವರ ಒಂದು ದೊಡ್ಡ ಪುಸ್ತಕ ತಗೊಂಡ್ರು..
ಅಲ್ಲಿ ನಾನು ಸ್ವಲ್ಪ ದಿನದಿಂದ ಹುಡುಕುತ್ತಿದ್ದ ಅ.ನ.ಕೃ. ಅವರ ಸಂಧ್ಯಾರಾಗ ನೋಡಿದೆ, ತಂದೆ. ಬೀchiಅವರ ಭಯಾಗ್ರಫಿಯಲ್ಲಿ ಅವರ conversionಗೆ ಕಾರಣವಾದ ಪುಸ್ತಕ ಅದು ಅಂತ ಓದಿದಾಗಿನೊಂದನೂ ಸಂಧ್ಯಾರಾಗ ಓದಬೇಕು ಅಂತ ಆಸೆ ಇತ್ತು. ಇವತ್ತು ಅದನ್ನ ಓದಿದೆ. ನಾಲ್ಕು ಗಂಟೆಗಳಲ್ಲಿ ಒಂದೇ ಸಾರಿಗೆ ಯಾವುದೇ ಬ್ರೇಕ್ ಇಲ್ಲದೆ ಓದಿದೆ. ಬೀchi ಹೇಳಿದಂತೆ, ಆ ಪುಸ್ತಕೆ ಯಾರಿಗಾದರೂ ಕನ್ನಡದ ದೀಕ್ಷೆಕೊಡಿಸುತ್ತದೆ. ಓದುವಾಗ ಹಲವು ಬಾರಿ ಕಣ್ಣು ತುಂಬಿಬರುವುದು ಸಹಜ. ಕನ್ನಡಪ್ರಿಯರೆಲರೂ ಓದಲೇಬೇಕು ಅಂತ ನಾನು ಹೇಳುತ್ತೇನೆ.
ಕನ್ನಡ ಅಷ್ಟಾಗಿ ಗೊತ್ತಿಲ್ಲದ ಮಕ್ಕಳಿಗೆ ಈ ಒಂದು ಪುಸ್ತಕ ಜಾತ್ರೆ ನಿಜಕ್ಕೂ ಒಳ್ಳೆಯ weekend trip. ಅಲ್ಪಸ್ವಲ್ಪ ಪ್ರೀತಿಯಿರುವ ಎಲ್ಲಾ ಕನ್ನಡ ತಂದೆ-ತಾಯಿಯರು ಮಕ್ಕಳಿಗೆ ಈ ಜಾತ್ರೆ ಮುಗಿಯೊಕ್ಮುಂಚೆ (೧೯ನವೆಂಬರ್ ಗೆ) ತೊರಿಸಿ ಕನ್ನಡದ ಪುಸ್ತಕಗಳ ಪರಿಚಯನಾದ್ರು ಮಾಡಿಸಬೆಕು ಅಲ್ಲವೆ? :)

Tuesday, May 09, 2006

Bangalore and its developments??

ಬೆಂಗಳೂರಿನ ಬೆಳವಣಿಗೆಯ ಬಗ್ಗೆ ತುಂಬಾ ಜನ ಮಾತಾಡ್ತಿದ್ದಾರೆ. ಅದರಲ್ಲೂ ದೈನಂದಿಕಗಳಂತೂ ಅದರ ಸುರಿಮಳೇನೆ ಹರಿಸ್ತಿವೆ. ತುಂಬಾ ಬೆಳಿತಿದೆ; ಉದ್ಯಾನ ನಗರ ಅಂತ ಕರೀತಿದ್ದ ಊರು ಈಗ ಕಾಂಕ್ರೀಟ್ ಉದ್ಯಾನಗಳ ನಗರವಾಗಿದೆ!

ಇದೇ ವಿಶಯವಾಗಿ ಮೊನ್ನೆ ನಮ್ಮ ಮನೇಲಿ ಎಲ್ಲಾ ಸೇರಿದ್ದಾಗ ಮಾತು ಶುರುವಾಯ್ತು. ಒಬ್ಬರು 'ನಮಗೆ ಈಗಾಗಿರುವ developments ಗಳು ಸಾಕು. ಬೇರೆಯವರು ಬಂದು ಇಲ್ಲಿ ಸೇರಿ ಆಗ್ತಿರೊ ಸಮಸ್ಯೆಗಳು ಸಾಕಾಗಿದೆ. ಈ trafficಉ, ಪರಕೀಯರ ಹಾವಳಿ ಬೇಡಪ್ಪ! ನಮಗೆ ಈ ಗ್ರೌತ್ ಆಗದಿದ್ರೂ ಪರವಾಗಿಲ್ಲ ಸಾಕು ಅಂತ ನಿಲ್ಲಿಸಬೇಕು. ನಮ್ಮ ಬೆಂಗಳೂರು ನಮಗಿರಲಿ’ ಅಂತ ಹೆಳಿದ್ರು. ಇದು ಒಂದು ರೀತಿಯಲ್ಲಿ ಸರಿಯಿರಬಹುದು, ಆದರೆ ನಮಗೆ ಈಗಾಗಿರೋ ಬೆಳವಣಿಗೆ ಸಾಕೆ? ಬೇರೆಯವರು ಬಂದಿರೋದರಿಂದ ನಮಗೆ ಉಪಯೋಗವಾಗಿದೆಯೆ ಅಥವ ಸಮಸ್ಯೆಯಾಗಿದೆಯೆ? ನಿಜವಾಗಿ ಈಗಿನ ಬೆಂಗಳೂರಿಂದ ಹಳೆಯ ಬೆಂಗಳೂರನ್ನು ಹುಡುಕುವ ಪ್ರಯತ್ನ ಮಾಡಬೇಕಿದೆಯ?

ಈ ITಯವರಿಂದಲೇ ನಮ್ಮ real-estate ಇಷ್ಟು ದುಬಾರಿಯಾಗಿರೋದು ಅನ್ನೊ allegation ನಿಜಾನ? ಅದರಿಂದ ನಮ್ಮೆಲ್ಲರಿಗೆ/ಕನ್ನಡಿಗರಿಗೆ ಏನೂ ಸಹಾಯ ಆಗಿಲ್ಲವೆ? IT ಬಂದದ್ದು ಒಳ್ಳೆಯದೊ ಅಲ್ಲವೊ? ಯೋಚಿಸಬೇಕಾದ ಸಂಗತಿ!!

Monday, May 08, 2006

ಹಳ್ಳ

"ಬಾಯಿಲ್ಲಿ" ಎಂದ ನನ್ನ ಸಹೋದ್ಯೋಗಿಯ monitor ಕಡೆ ನೊಡಿದೆ. ಆವನು Reliance Industries' shares ತೋರಿಸಿ, 'ಎರಡು ಸಾವಿರ ಬಂದತಕ್ಷಣ ಖುಷಿಪಟ್ಟು ಮಾರಿದೆಯಲ್ಲ, ಈಗ ನೊಡು' ಎಂದ. ಈಗ ಅದು ರೂ. 1161 ರಲ್ಲಿ ನಡಿತಿದೆ. ಅವನು ಹೇಳೊ ಪ್ರಕಾರ ನನಗೆ ಪ್ರತಿ ಶೇರಿಗೆ ರೂ. 4೦೦ ಸಿಗುತ್ತಿತ್ತು if I had not sold those shares. 'ತೋರಿಸಿ ನಂಗೆ ಹೊಟ್ಟೆ ಉರಿಸಬೇಡವೊ... ನಾವೆಲ್ಲ ಅಲ್ಪತೃಪ್ತರು ಕಣೊ' ಅಂದೆ!! ಹೇಗೊ ಮಾಡಿದ ತಪ್ಪನ್ನ ಸಾರಿಸಿಕೋಂಡೆ!! :)

ಜೊತೆಗೆ ಅವನನ್ನು ನೋಡಿ 'ಹಳ್ಳದ ಕಡೆಗೆ ನೀರು ಹರಿವುದು...' ಅಂತ ಹೇಳಿದ ಮಾತು ನೆನಪಿಗೆ ಬಂತು :)

Friday, April 21, 2006

My short musing on MM

ನಾನು ಮೊದಲ ಬಾರಿ 'ಮೈಸೂರು ಮಲ್ಲಿಗೆ' ಧ್ವನಿ ಸುರಳಿ ಕೇಳಿದಾಗಿನಿಂದ ಅದರ ಸಂಗೀತಕ್ಕೆ ಮಾತ್ರವಲ್ಲ, ಅದರ ಒಳಗಿನ ಕಾವ್ಯ ಸಂಪತ್ತಿಗೂ ಮಾರುಹೋದೆ. ಆಗ ನಾನು ತುಂಬಾ ಚಿಕ್ಕವನು. ಆದರೂ ಕಾವ್ಯ, ಕನ್ನಡದ ಕವಿಗಳ ಬಗ್ಗೆ ಒಲವು/ಅರಿವು ಅಲ್ಪ-ಸ್ವಲ್ಪವಿತ್ತು - ನಾ ಓದಿದ ಕನ್ನಡ ಮಾಧ್ಯಮದ ಶಾಲೆಗೆ ಧನ್ಯವಾದ. ಮೈಸೂರು ಮಲ್ಲಿಗೆಯಲ್ಲಿದ್ದ ೯ ಹಾಡುಗಳನ್ನು ಕೇಳಿದಮೇಲೆ ಆ ಕವನ ಸಂಕಲನವನ್ನು ಓದುವ ಆಸೆ ಜಾಸ್ತಿಯಾಯ್ತು. ಅಲ್ಲಿ, ಇಲ್ಲಿ ಹುಡುಕಿ, ನಂತರ ಅವರ ಸಂಪೂರ್ಣ ಸಂಕಲನ 'ಮಲ್ಲಿಗೆಯ ಮಾಲೆ' ಕೊಂಡೆ. ಈಗಾಗಲೇ ನನ್ನ ಕನ್ನಡದ ಸಾಹಿತ್ಯದ ಹವ್ಯಾಸ ಕಡಿಮೆಯಾಗಿದೆ; ಹಲವಾರು ವರ್ಷಗಳೇ ಕಳೆದಿವೆ. ಆದರೂ 'ಮೈಸೂರು ಮಲ್ಲಿಗೆ' ಬಗೆಗಿನ ನನ್ನ ಅನಿಸಿಕೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಪ್ರಯತ್ನವೇ ಇದು.

ಮೈಸೂರು ಮಲ್ಲಿಗೆಬಗ್ಗೆ ಎಚ್. ಎಸ್. ರಾಘವೆಂದ್ರರಾವ್ ಅವರು ಅದಕ್ಕೆ ಪಾಶ್ಚಿಮಾತ್ಯದ ಪ್ರಭಾವವಿದೆ ಎಂದು ಒಂದೆಡೆ ಬರೆದಿದ್ದಾರೆ. ಅಂತೆಯೆ, ಅದರಲ್ಲಿ 'ಹಳಗನ್ನಡಗಳ ಕಾಮಸೀಮಿತ ಪ್ರಣಯಕ್ಕೆ ಇಲ್ಲಿ ಪಾರಸ್ಪರಿಕ ಭಾವನೆಗಳ ಉಡುಗೆ ಸಿಕ್ಕಿದೆ' ಎಂದಿದ್ದಾರೆ. ಅಂದಿನ ಕಾಲಕ್ಕೆ ಆ ಮಾತು ಸೂಕ್ತವಿರಬಹುದು ಆದರೆ ಅದೇ ಮೈಸೂರು ಮಲ್ಲಿಗೆಯ ಕವನಗಳನ್ನು ಇಂದಿನ ಯುವಕ-ಯುವತಿಯರು ಓದಿದಲ್ಲಿ, ಹಲವು ವಿಷಯಗಳು ಇಂದಿಗೂ ಸಮಂಜಸ ಎಂದೆನಿಸುತ್ತದೆ. ಅವರೂ ಕೂಡ ಅದನ್ನೇ ಬಯಸುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ಅದರಲ್ಲೂ ಕೆ.ಎಸ್.ನ. ಅವರು ಹೆಣ್ಣನ್ನು ಬಣ್ಣಿಸಿರುವ ರೀತಿಯಂತೂ ಇಂದಿಗೂ ಸಲ್ಲುತ್ತದೆ. ಅದನ್ನೇ ಇಂದಿನ ಯುವಕ (ಕನ್ನಡ ಬಲ್ಲ ಯುವತಿಗೆ) ಹೇಳಿದಲ್ಲಿ ಅವಳ ಪ್ರೀತಿ ಗಿಟ್ಟಿಸುವುದರಲ್ಲಿ ಸಂಶಯವೇಯಿಲ್ಲ. 'ಹಳ್ಳಿಯ ಚಲುವೆಗೆ'ಯಲ್ಲಿ ಹೇಳಿರುವ ಈ ಸಾಲುಗಳನ್ನು ನೋಡಿ:

"ಬೆಳ್ಳಬೆಳ್ಳಗೆ ತೆಳ್ಳತೆಳ್ಳಗಿಹೆ ನೀನು;
ಬೇಟೆಗಾರನ ಬಿಲ್ಲಿನಂತಿರುವೆ ನೀನು.
ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು,
ಪಾರಿವಾಳದ ಕಣ್ಗೆ ನೆರಳನಿತ್ತಿಹುದು.
ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು;
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು;
ತುಂಬು ಹರೆಯದ ಹುಡುಗಿ ನೀನೊಲುಮೆಗೀಡು;
ನಂಬಿ ನನ್ನನು ವರಿಸಿ ಸಂತಸದಿ ಬಾಳು."

ಇದನ್ನು ಕೇಳಿ ಯಾರು ತಾನೇ ಸೋಲುವುದಿಲ್ಲ ಹೇಳಿ? ಅವಳನ್ನು ಹೊಗಳುವುದರ ಜೊತೆಗೆ ಅವನು ಅವಳ ಕೈಬಿಡನೆಂಬ ಆಶ್ವಾಸನೆ ಕೂಡ ನೀಡುತ್ತನೆ. ಪ್ರೀತಿಯಿರುವ ಯಾವ ಹುಡುಗಿಗೆ ಅವಳ ಪ್ರಿಯತಮನ ಇಂತಹ ನಂಬಿಕೆ ಬೇಡ ಹೇಳಿ? ಇಂದಿಗೂ - ಎಂದೆಂದಿಗೂ ಕೂಡ - ಪ್ರೀತಿ, ದಾಂಪತ್ಯಗಳು ನಿಂತಿರುವುದೇ ಈ ನಂಬಿಕೆಯ ಮೇಲಲ್ಲವೆ?

'ಗೃಹಲಕ್ಷ್ಮಿ'ಯ ಕೊನೆಯಲ್ಲಿ ಕೆ.ಎಸ್.ನ. ಹೇಳುತ್ತಾರೆ: '... ತಾರೆಗಳ ಮೀಟುವೆವು, ಚಂದಿರನ ದಾಟುವೆವು; ಒಲುಮೆಯೊಳಗೊಂದು ನಾವು; ನಮಗಿಲ್ಲ ನೋವು, ಸಾವು'. ಎಂತಹ ಸುಂದರ ಕಲ್ಪನೆ! ಅಲ್ಲವೆ? ಯಾವ ದಂಪತಿಗಳಿಗೆ ಇದು ಬೇಡ? ಹೇಳುವ ರೀತಿ ಕೊಂಚ ಬೇರೆಯಾಗಿರಬಹುದು ಆದರೆ ಅರ್ಥ ಇದೇ ಅಲ್ಲವೆ?

ಈ ಸಾಲುಗಳು ನೆನಪಿದೆಯೆ? 'ಯಾರು ಕದ್ದು ನೋಡಿದರೇನು? ಊರೆ ಎದ್ದು ಕುಣಿದರೇನು? ಜನರ ಬಾಯಿಗಿಲ್ಲ ಬೀಗ, ಹೃದಯದೋಳಗೆ ಪ್ರೇಮರಾಗ ಇಂಥಕೂಗನಳಿಸಿದೆ, ಬೆಳಗಿ ಬದುಕ ಹರಸಿದೆ'. ಅಬ್ಬ! ನಮ್ಮಲ್ಲೊಂದು ಗಾದೆಯಿದೆ - 'ಜನರನ್ನು ಮೆಚ್ಚಿಸಲು ಜನಾರ್ಧನನಿಂದಲೂ ಸಾಧ್ಯವಿಲ್ಲ' ಎಂದು. ಎಷ್ಟೋಜನ ಜನಕ್ಕಂಜಿ ತಮಗೆ ಪ್ರೀತಿಯವರ ಜೊತೆ ಹೋಗದೆ ಮನಸ್ಸಿನಲ್ಲೇ ಮಣೆಹಾಕುವುದನ್ನು ಕೇಳಿದ್ದೇನೆ, ನೋಡಿದ್ದೇನೆ - ಅದು ಮದುವೆಯ ಮೊದಲು. ಆದರೆ ಮದುವೆಯ ಮೊದಲ ದಿನಗಳು ಹೇಗಿದ್ದವು ಎಂದು ಹೇಳಿರುವ ಈ ಸಾಲುಗಳು ಪ್ರಸ್ತುತ ದಿನಗಳಲ್ಲಿ ಪ್ರೀತಿಸಿದವನೊಂದಿಗೆ ಹೋಗಲು ತಪ್ಪಿಲ್ಲ ಎಂದು ಸಾರಿ ಸಾರಿ ಹೆಳಿದಂತಿದೆ ನನಗೆ. ಆದರೂ ಕೆಲವು ಸಮಾಜವಾದಿಗಳು ಇದನ್ನು ತಪ್ಪು ಎಂದು ವಾದಿಸುವರೆಂದು ನಾನು ಬಲ್ಲೆ. ಆವರಿಗೊಂದು ನನ್ನ ಪ್ರಶ್ನೆ. ಪ್ರೀತಿಯಲ್ಲಿ ತಪ್ಪಿಲ್ಲವೆಂದವರು ಅದನ್ನು ವ್ಯಕ್ತಪಡಿಸುವ ರೀತಿಯಲ್ಲಿ ತಪ್ಪೇಕೆ ನೋಡುತ್ತರೆ? ನಿಜವಾದ ಪ್ರೀತಿಯಲ್ಲಿ ಕಾಮಕ್ಕೆ ಎಷ್ಟರಮಟ್ಟಿಗೆ ಪ್ರಾಮುಖ್ಯತೆಯಿದೆ?

ಕೆ.ಎಸ್.ನ. ಅವರ ಪ್ರಿಯತಮ ತನ್ನ ಪ್ರೇಯಸಿಯ ಪ್ರೀತಿಯನ್ನು ವ್ಯಕ್ತಪಡಿಸಿರುವ ರೀತಿ ನನಗೆ ತುಂಬ ಇಷ್ಟವಾಯಿತು. ಅವನಿಗೆ ತನ್ನ ಪ್ರೇಯಸಿಯ ಪ್ರೀತಿ 'ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ, ನಿನ್ನೊಲುಮೆ ನನ್ನಕಂಡು' ಎನ್ನಿಸುತ್ತದೆ. ಸಾಗರದ ಹುಣ್ಣಿಮೆ ಉಬ್ಬರಕ್ಕೆ ಎಲ್ಲರೂ ಭಯಪಡುವುದರಲ್ಲಿ ಸಂಶಯವಿಲ್ಲ, ಆದರೆ ಈ ಉಬ್ಬರಕ್ಕೆ ಭಯವುಂತೆ!? ಮಿಥ್ಯಪ್ರೇಮಿಗಳಲ್ಲಿ ಇರಬಹುದು, ಆದರೆ ನಿಜ ಪ್ರೇಮಿಗೆ ಅವಳ ಪ್ರೀತಿ 'ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ ಸಾಗುವುದು ಕನಸಿನಂತೆ'. ಇದು ಕಲ್ಪನೆಯ? ಕಲ್ಪನೆ ಎನ್ನುವುದಕ್ಕಿಂತ ಅದನ್ನು ಅನುಭವಿಸಿ ನೋದುವುದರಲ್ಲಿ ಹೆಚ್ಚಿನ ಅರ್ಥವಿದೆ ಎನ್ನುವುದು ನನ್ನ ಅನಿಸಿಕೆ. ಎಷ್ಟೋ ಪ್ರೇಮಿಗಳಿಗೆ ಇದು ಸತ್ಯ ಅಲ್ಲವೆ? ನೀವೂ ಅನುಭವಿಸಿ.

[I wrote this a year ago when I bought 'malligeya maale'. Now I feel I could have added or modified this, but didn't want to change the original script. Sharing the same]

Wednesday, April 19, 2006

ಜೀವನ

ಮೊನ್ನೆ ಜಯನಗರದ ದೇವಸ್ಥಾನವೊಂದರಲ್ಲಿ ನನ್ನ ಚಪ್ಪಲಿ ಹಾಕಲು ಬಗ್ಗಿದಾಗ, "ನಾನು Insurance agentಉ" ಎಂದ ಒಂದು ಧ್ವನಿ ಕೇಳಿತು. ಕತ್ತು ಮೇಲೆತ್ತಿ ನೋಡಿದೆ. ೪೦ರ ಪ್ರಾಯದ ಒಬ್ಬರು ತಮ್ಮ ಕೈ ಹಿಂದೆ ಕಟ್ಟಿ ನಿಂತಿದ್ದರು: ಉಬ್ಬು ಹಲ್ಲು, ಅರ್ಧ ತೆರೆದ ಕಣ್ಣುಗಳು, summer cut ಗಿಂತಲೂ ಚಿಕ್ಕದಾದ ಕೂದಲುಗಳು, ಸಾಧಾರಣವಾದ ಬಟ್ಟೆ. ನನ್ನನ್ನು ನೋಡಿ, "ನಾನು Insurance agentಉ. ನಿಮ್ಮದು ಏನಾದ್ರು ಇದ್ರೆ ಮಾಡಿಸಿಕೊಡುತ್ತೀನಿ. ಮಾಡಿಸ್ತಿರ?" ಅಂದ್ರು. ತುಂಬ ದೀನ ಭಾವದಲ್ಲಿದ್ದವರನ್ನು ಕಂಡು ಒಂದು ಕ್ಷಣ ನನ್ನ ಮನಸ್ಸು ಅಯ್ಯೊ ಅಂತು. ಆದರೂ ನಾನು ಏನೂ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. "ನಾನು ಎಲ್ಲ ಮುಗಿಸಿಬಿಟ್ಟೆನಲ್ಲ, ಸ್ವಾಮಿ" ಅಂದೆ. ಅದಕ್ಕವರು, "ಹೌದೇ..." ಎಂದು ರಾಗ ಎಳೆದು "Post office RDನೂ ಮಾಡಿಸ್ತಿನಿ. ಬೇರೆ ಯಾರಿಗಾದರೂ ಬೇಕಿದ್ದರೆ ನಂಗೇ ಹೇಳಿ. ದೇವಸ್ಥಾನಕ್ಕೆ ಬರ್ತಿರ್ತೀರ ಅಲ್ವ?" ಎಂದರು. ಆಯಿತು ಎಂದು ಹೇಳಿ ನಾನು ಹೊರಬಿದ್ದೆ.

Insurance ಮಾಡಿಸಿ ಅಂತ ಬರೋರು ಸರ್ವೇ ಸಾಮಾನ್ಯ. ಆದರೆ ಇವರ ದೀನಸ್ಥಿತಿ ನೋಡಿ ನನ್ನ ಮನಸ್ಸು ಚುರುಕ್ ಅಂತು. ನಾವೇನೆ ಆದರೂ ಪರಿಸ್ಥಿತಿ ಮನುಷ್ಯನನ್ನು ಏನೆಲ್ಲ ಮಾಡಿಸುತ್ತದೆ ಅಲ್ಲವೆ? ಸ್ವಾಭಿಮಾನ ಅಡ್ಡಬರುವುದೇ ಇಲ್ಲವೆ ಇವರಿಗೆ? ಅವರ ವೃತ್ತಿ ಎಲ್ಲರನ್ನು ಕೇಳುವುದೇ ಇರಬಹುದು, ಆದರೆ ಈಗಿನ ಖಾಸಗಿ ಸಂಸ್ಥೆಗಳು ಇಂಥವರ ಹೊಟ್ಟೆಗೆ ಹೊಡೆಯುತ್ತಿದ್ದಾರೇನೊ ಅನ್ನಿಸುತ್ತದೆ. ಇಂಥ ಮನುಷ್ಯರನ್ನು ನೋಡಿ ನಗುವವರೆಷ್ಟೊ - ಆಡಿಕೊಳ್ಳುವವರೆಷ್ಟೊ. ಏನೇ ಆಗಲಿ ಜೀವನ ನಡೆಯಲೇ ಬೇಕಲ್ಲವೆ?

"ಉದರನಿಮಿತ್ತಂ ಬಹುಕೃತ ವೇಷಂ" - ಎಷ್ಟು ನಿಜ!