ಅದೊಂದು ೧೫ರಿಂದ ೨೦ ಅಡಿ ಎತ್ತರದ ಕಟ್ಟಡ. ಸುಮಾರು ೪೦ ಅಡಿ ಉದ್ದ ಮತ್ತೆ ೩೦ ಅಡಿ ಅಗಲದ ಕೋಣೆಯನ್ನ ಆ ಕಟ್ಟಡದಲ್ಲಿ ಮಾಡಿದ್ದಾರೆ. ಕೋಣೆಯ ಒಳಗೆ ಹೋಗಲು ಎರಡು ಮೆಟ್ಟಿಲುಗಳಿವೆ – ಕಟ್ಟಡದ ಎಡಭಾಗಕ್ಕೆ. ಮೆಟ್ಟಿಲು ಹತ್ತಿದ ತಕ್ಷಣ ಕಟ್ಟಡದ ಉದ್ದಕ್ಕೂ ಇರೋ ಜಗಲಿ ಬರುತ್ತೆ. ಅದನ್ನ ಧಾಟಿದರೆ ಕೋಣೆಗೆ ಪ್ರವೇಶ. ಆ ಕೋಣೆಯ ಪ್ರವೇಶವಾದ ಕೂಡಲೆ ಎದುರಿಗೋದು ಮೇಜು ಮತ್ತೆ ಕುರ್ಚಿ ಇದೆ. ಹಾಗೇ ಅಲ್ಲೇ ನಿಂತು ಬಲಕ್ಕೆ ತಿರುಗಿದರೆ ಸಾಲಾಗಿ ನಾಲ್ಕೈದು ಮಣೆಗಳಿವೆ. ಪ್ರತಿಯೊಂದು ಸಾಲಿನಲ್ಲೊ ಮಧ್ಯ ಸ್ವಲ್ಪ ಜಾಗ ಬಿಟ್ಟಿದ್ದಾರೆ – ಮಣೆಗಳ ಮಧ್ಯ – ಮುಂದಿನಿಂದ ಹಿಂದಿನವರೆಗೆ ಓಡಾಡೋಕೆ. ಬಲಭಾಗದ ಗೋಡೆಗೆ ಅವುಚಿಕೊಂಡಂತೆ ಎರಡು ಬೆಂಚು ಹಾಕಿದೆ. ಗಿಜಿ-ಗಿಜಿ ಅಂತ ಮಾತಾಡೋ ಶಬ್ಧ ಯಾವಾಗಲೂ. ಮಧ್ಯೆ ಮಧ್ಯೆ “ಏಯ್! ಏಯ್!!” ಅನ್ನೋ ಮಾತುಗಳು ಒಂದ್ ಕಡ್ಡಿಯನ್ನು ಆ ಮೇಜಿನಮೇಲೆ ಹೊಡೆದಾಗ ಬರೋ ’ಠಪ್’ ಅನ್ನೋದರಜೊತೆಗೆ ಕೇಳುತ್ತೆ. ಆಗ ಗಿಜಿ-ಗಿಜಿ ಸ್ವಲ್ಪ ಕಡಿಮೆ ಯಾಗುತ್ತೆ. ಒಂದೆರಡು ನಿಮಿಷಗಳಷ್ಟೆ! ಮತ್ತೆ ಗಿಜಿ-ಗಿಜಿ ಶುರು!
ಸರಿ, ಮೇಜಿನ ಹಿಂದಿದ್ದ ಕುರ್ಚಿಯಮೇಲೆ ಕುಳಿತಿದ್ದ ಮಧ್ಯವಯಸ್ಕ ಈಗ ಎದ್ದ. ಮೇಜಿನ ಹಿಂದಿದ್ದ ಸಣ್ಣ ಸಣ್ಣ ಮಕ್ಕಳನ್ನು ನೋಡಿ, “ಏಯ್! ಎಲ್ಲಾರೂ ಅ, ಆ, ಇ, ಈ ಬರೀರಿ. ಬಂದು ನೋಡ್ತಿನಿ ಈಗ” ಅಂದ್ರು. ಆ ಪಿಳ್ಳೆಗಳು ಮಣೆಯ ಕೆಳಗೆ ಇಟ್ಟ ಹಳೆಯ ಮಾಸಿದ ಕೆಂಪು-ನೀಲಿ, ಹಸಿರು-ಬಿಳಿ, ಹೀಗೆ ಹಲವಾರು ಬಣ್ಣ-ಬಣ್ಣದ ಕೈ ಚೀಲಗಳನ್ನ ಎಳೆದು ಅದರೊಳಗಿದ್ದ ಒಂದು ಕಪ್ಪಗಿನ ಸ್ಲೇಟು ತಗೋಳತ್ವೆ. ಕೆಲವು ತಗಡಿನಿಂದ ಮಾಡಿ ಮರದ ಕಟ್ಟು ಹಾಕಿದಾವಾದ್ರೆ, ಇನ್ನು ಕೆಲವು ಬಳಪದ ಕಲ್ಲಿನಿಂದ ಮಾಡಿದವು. ಕೆಲವಕ್ಕೆ ಕಟ್ಟೇ ಇಲ್ಲ. ಹೊಡೆತ ತಪ್ಪಿಸಿಕೊಳ್ಳಕ್ಕೆ ಬರೀಲೇ ಬೇಕು.
ಈ ಪಿಳ್ಳೆಗಳು ಇಷ್ಟೆಲ್ಲಾ ಮಾಡೊಹೊತ್ಗೆ, ಆ ಮಧ್ಯ ವಯಸ್ಕ ಎರಡನೇ ಮಣೆಯಲ್ಲಿದ್ದವರ ಬಳಿ ಹೋಗಾಗಿತ್ತು. ಅವರಿಗೆ “ಪುಸ್ತಕ ತಂದಿದೇರೇನ್ರೋ ಎಲ್ಲಾ?” ಅಂತ ಗದರಿಸಿದ್ರು. ಎಲ್ಲಾರೂ ಮತ್ತೆ ಅದೇ ಮಾಸಿದ ಕೈ ಚೀಲಗಳಿಂದ ಇದ್ದ ಎರಡೇ ಪುಸ್ತಕಗಳಿಂದ ಒಂದನ್ನು ತೆಗೆದರು. ಹೆಚ್ಚೂಕಡಿಮೆ ಎಲ್ಲರ ಪುಸ್ತಕಗಳೂ ಹರಿದಿವೆ. ಮೊದಲೆರಡು ಮತ್ತೂ ಕೊನೆಯ ಹಲವಾರು ಪುಟಗಳೇ ಕಾಣೆಯಾಗಿವೆಯಾದರೂ ಪುಸ್ತಕವಂತೂ ಇದೆ! ಸರಿ, ’ಈತ ಗಣಪ. ಈಶನ ಮಗ ಗಣಪ’ ಓದಿಸಿಯಾಯ್ತು. ಇದು ಒಂದನೇ ತರಗತಿಯ ಮೊದಲನೇ ಪಾಠ!
ಮುಂದಿನವು ಅಕ್ಷರಮಾಲೆ ಬೆರೆಯುವಾಗ, ಅವರ ಹಿಂದಿನವು ಗಣಪ-ಈಶನ ಪಾಠ ಒಪ್ಪಿಸುವಾಗ ಅವರ ಹಿಂದೆ ಕೂತಿದ್ದ ಮಕ್ಕಳು ಎರಡನೇ ತರಗತಿಯ ಕನ್ನಡ ಮತ್ತು ಜೊತೆಗಿನದ್ದು ಓದುತ್ತಿದ್ದವು. ಓದುತ್ತಿದ್ದರೋ ಅಥವಾ ಹಾಗೆ ನಟಿಸುತ್ತಿದ್ದರೋ ಗೊತ್ತಿಲ್ಲ ಯಾಕೇಂದ್ರೆ ಸ್ವಲ್ಪ ಮಟ್ಟಿಗೆ ಗಿಜಿ-ಗಿಜಿ ಇತ್ತು! ಕೆಲವು ಮಗ್ಗಿ ಬಾಯಿ ಪಾಠ ಮಾಡುತ್ತಿದ್ದವು.
ಇನ್ನೊಂದು ಮೂಲೆಯಲ್ಲಿ ಒಂದು ಕಬ್ಬಿಣದ ಪೆಟ್ಟಿಗೆಯಿದೆ. ಆದರ ಪಕ್ಕದಲ್ಲಿ ಒಂದು ನೈಲಾನ್ ಚೀಲ. ಇವೆರಡೂ ನಾಲ್ಕೈದು ಇಟ್ಟಿಗೆಗಳ ಮೇಲೆ ಇಟ್ಟಿದ್ದಾರೆ. ಇಟ್ಟಿಗೆಗಳನ್ನ ಎರಡು ಅಂಗುಲದಷ್ಟು ಎತ್ತರದ ಮರಳಿನ ಕಟ್ಟೆ ಕಟ್ಟಿ ನೀರು ಹಾಕಿದ್ದಾರೆ – ಇರುವೆಗಳು ಚೀಲದಲ್ಲಿರುವ ತಿಂಡಿಗೆ ಹತ್ತಬಾರದು ಅಂತ.
ನಿಮಗೆ ಇಷ್ಟು ಹೊತ್ತಿಗೆ ಗೊತ್ತಾಗಿರಬೇಕು ನಾನು ಏನು ಹೇಳುತ್ತಿದ್ದೇನೆ ಅಂತ. ಇದು ನಮ್ಮ ಹಳ್ಳಿಗಳ ಏಕೋಪಾಧ್ಯಾಯ “ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳ” ಪರಿಸ್ಥಿತಿ. ಒಂದರಿಂದ ನಾಲ್ಕನೇ ತರಗತಿಯ ಮಕ್ಕಳು ಒಂದೇ ಕೋಣೆಯಲ್ಲಿ ಓದಬೇಕು. ಉಪಾಧ್ಯಾರಯೂ ಒಬ್ಬರೆ. ಅವರು ಒಂದು ತರಗತಿಯ ಒಂದು ಪಾಠ ಮುಗಿಸಿ ಮತ್ತೊಂದಕ್ಕೆ ಹೋಗಬೇಕು. ಇಂಥಾ ಶಾಲೆಗಳು ನೂರಾರು-ಸಾವಿರಾರು. ನಾನು ಓದುವಾಗ ನನ್ನ ಊರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿದ್ದ ಶಾಲೆಗಳೆಲ್ಲಾ ಇವೇ. ಕೆಲವರು ಸ್ವಲ್ಪ ಭಾಗ್ಯಶಾಲಿಗಳು. ಯಾಕೆಂತಿರ? ಅವರೇನಾದರೂ ’ಗ್ರಾಮ’ ಅಂತ ಕರೆಸಿಕೊಳ್ಳೊ ಊರಿನಲ್ಲಿದ್ದರೆ ಅವರಿಗೆ ’ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ’ ನಲ್ಲಿ ಓದೋ ಅವಕಾಶ ಇರುತ್ತೆ. ಏಳನೇ ತರಗತಿಯವರೆಗೆ ಇರತ್ತೆ ಆ ಶಾಲೆಯಲ್ಲಿ. ಅಲ್ಲಿಯ ಪರಿಸ್ಥಿತಿ ಸ್ವಮ್ಪ ಉತ್ತಮ. ನಾನು ನೋಡಿದ ಇಂಥಹ ಒಂದು ಶಾಲೆಯಲ್ಲಿ ಐದು ಕೋಣೆಗಳು. ಒಂದು “office room” ಅಂತ ಆಗಿತ್ತು. ಇನ್ನುಳಿದ ನಾಲ್ಕು ಕೋಣೆಗಳು: ಒಂದರಲ್ಲಿ ಒಂದು ಮತ್ತು ಎರಡನೇ ತರಗತಿ, ಇದೇ ಕೋಣೆಯ ಜಗುಲಿಯಲ್ಲಿ ಶಿಶುವಿಹಾರದ ಚಿಳ್ಳೆಗಳು; ಮತ್ತೊಂದರಲ್ಲಿ ಮೂರನೆ ಮತ್ತು ನಾಲ್ಕನೇ ತರಗತಿ, ಮತ್ತೊಂದರಲ್ಲಿ ಐದನೇ ತರಗತಿ – ಇದು ಸ್ವಲ್ಪ ದೊಡ್ಡದು ಯಾಕೇಂದ್ರೆ ನಮ್ಮಾರಿನ ಸುತ್ತಲಿನಿಂದೆಲ್ಲಾ ಉತ್ತೀರ್ಣರಾದ ಹುಡುಗರು ಇಲ್ಲಿಗೇ ಐದನೆ ತರಗತಿಗೆ ಬರೋದು; ಆರನೇ ಮತ್ತು ಏಳನೇ ತರಗತಿಗಳು ಅವರದೇ ಕೊಠಡಿಗಳು. ಏಳನೇ ತರಗತಿ ಹಿಡುಗರಿಗೆ ಮಾತ್ರ ಸಂಪೂರ್ಣವಾಗ್ ಬೆಂಚುಗಳು! ಉಳಿದೆಲ್ಲಾ ಹುಡುಗರು ಮಣೆಯ ಮೇಲೆಯೇ ಕೂರಬೇಕು. ಒಟ್ಟು ಸುಮಾರು ೫೦೦-೬೦೦ ಮಕ್ಕಳು ಇಲ್ಲಿ ಓದುತ್ತಾರೆ. ಉಪಾಧ್ಯಾರರು ಮಾತ್ರ ೫ ಅಥವಾ ೬ ಮಂದಿ. ಏನಿದು ಯಾವುದೋ News channel ನಲ್ಲಿ ಬರ್ಬೇಕಿರೋ ವರದಿ ಇಲ್ಲಿ ಅಪ್ಪಿತಪ್ಪಿ ಬಂತೇ ಅನ್ಕೋತಿದೀರ? ಇಲ್ಲ. ಇದು ನಿಜ. ಎಲ್ಲಿ ಬಂದರೇನು ಸ್ವಾಮಿ?
ಇದು ಯಾವುದೋ ಓಬೀರಾಯನ ಕಾಲದ ಕಥೆ ಅಂತಿದ್ದೀರ? ಅಲ್ಲ. ಈಗಕೂಡ ನಮ್ಮ ಹಳ್ಳಿಗಳ ಶಾಲೆಗಳ ಪರಿಸ್ಥಿತಿ ಇದೇ. ಸ್ವಲ್ಪ ಚೆನ್ನಾಗಿದೆ ಅಂತ ಕೇಳುತ್ತಿದ್ದೀನಿ – ಹಲವಾರು ಏಕೋಪಾಧ್ಯಾಯ ಪ್ರಾಥಮಿಕ ಶಾಲೆಗಳನ್ನ ಹಿರಿಯ ಪ್ರಾಥಮಿಕ (ಅಂದರೆ middle school) ಶಾಲೆಗಳನ್ನಾಗಿ ಮಾಡಿದ್ದಾರಂತೆ.
ಇಂಥಾ ಶಾಲೆಗಳಲ್ಲಿ ಓದುತ್ತಿರುವ ಹುಡುಗರಿಗೆ ಇಷ್ಟು ಕಷ್ಟ ಇದೆ ಅಂತ ಬೆಂಗಳೂರಿನಲ್ಲಿರುವ ಮಂದಿಗೆ ಹೇಗೆ ಗೊತ್ತಾಗಬೇಕು? ಐದನೇ ತರಗತಿಯಲ್ಲಿ ಮೊದಲಬಾರಿಗೆ ಆಂಗ್ಲ ಭಾಷೆ ಪ್ರಾರಂಭ. ಅಲ್ಲಿನ ಹುಡುಗರಿಗೆ ಐದನೇ ತರಗತಿಯಲ್ಲೇ A, B,C, D ಕಲಿತು ಅದೇ ವರ್ಷ ತಥೆಗಳನ್ನೆಲ್ಲಾ ಓದಬೇಕು. ಇದೊಂಥರಾ ಮುದ್ದಣ ಹೇಳಿದಂತೆ ನೀರಿಳಿಯದ ಗಂಟಲಲ್ಲಿ ಕಡುಬುತುರುಕಿದಂತಾಯ್ತು. ಅಲ್ಲಿನ ಉಪಾಧ್ಯಾಯರು ಆಂಗ್ಲ ಭಾಷೆಯನ್ನ ಕೇವಲ ಒಂದುಬಾರಿ ಓದಿ ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡುತ್ತಾರೆ. ಮಾತು-ಕಥೆಗಳೆಲ್ಲಾ ಕನ್ನಡವೇ. ಆದು ನಮ್ಮ ಆಡು ಭಾಷೆ. ಸಹಜವಾಗಿ ಕನ್ನಡವೇ ಮುಂದು. ಇದೆಲ್ಲಾ ಮುಗಿಸಿ ಯಾರಾದರೂ ಹುಡುಗರು ಮುಂದೆ ಪ್ರೌಢಶಾಲೆಗೋ ಅಥವಾ pre-universityಗೋ ಆಂಗ್ಲ ಮಾಧ್ಯಮಕ್ಕೆ ಸೇರಿದರೆಂದರೆ ಮುಗಿಯಿತು. ಮೊದಲು ಅವರ ಕಣ್ಣುಗಳಲ್ಲಿ ಧಾರಾಕಾರವಾಗಿ ಗಂಗೆ ಹರಿಯುತ್ತಿರುತ್ತಾಳೆ – “ನಾನೇಕೆ ಇಂಥಾ ತಪ್ಪು ಮಾಡಿದೆ” ಅಂತ. ಅದು ಎರಡೂ ಆಗಬಹುದು, ಮೊದಲಿಂದ ಯಾಕೆ ಆಂಗ್ಲ ಭಾಷೆಯಲ್ಲಿ ಓದಲಿಲ್ಲ ಅಂತ, ಹಾಗೂ ಈಗೇಕೆ ಆಂಗ್ಲ ಮಾಧ್ಯಮಕ್ಕೆ ಸೇರಿದೆ ಅಂತ. ಅವರು ಆಂಗ್ಲ ಮಾಧ್ಯಮಕ್ಕೆ ಹೋಗದಿದ್ದರೆ ಅವರ ಆಂಗ್ಲ ಭಾಷೆಯ ಮೇಲಿನ ಹಿಡಿತ ಚೆನ್ನಾಗುವುದೇ ಇಲ್ಲ. ಅದಿಲ್ಲದಿದ್ದರೆ ಮುಂದೆ ಓದಬೇಕೆನ್ನುವ ಹಂಬಲ??! ಅದನ್ನು ಹೇಗೆ ಪರಿಹರಿಸಿಕೊಳ್ಳೋದು? ಅದಕ್ಕೆ ಈಗ ಪರಿಶ್ರಮ ಪಡಲೇ ಬೇಕು. ಕಾಲೇಜಿಗೆ ಪಟ್ಟಣಗಳಿಗೆ ಓದಲು ಬರೋ ಇದೇ ಹುಡುಗರು ಅಲ್ಲಿನ ಆಂಗ್ಲಭಾಷಾ ಪರಿಣತ ಹುಡುಗರ ಜೊತೆ ಪ್ರತಿಸ್ಪರ್ಧಿಯಾಗಿ ಇಳಿಯಲೇಬೇಕು. ಹಳ್ಳಿಗಳಿಂದ ಬಂದ ಹುಡುಗರು ಯಾಕೆ ಸ್ವಲ್ಪ ಹಿಂದೆ ಉನ್ನತ (ಆಂಗ್ಲವನ್ನೊಳಗೊಂಡ) ಶಿಕ್ಷಣದಲ್ಲಿ ಅಂದರೆ ಇದೇ ಕಾರಣಕ್ಕಾಗಿ. ಆದರೆ ಈ ಸ್ಪರ್ಧೆ ಸುಲಭವಾಗಿ ಎದುರಿಸಲು ಈ ಹಳ್ಳಿ ಮಕ್ಕಳಿಗೆ ಸಾಧ್ಯವೇ ಅಂತಿರಾ? ಇಲ್ಲ! ಸಾಧ್ಯವೇ ಇಲ್ಲ. ಒಂದು ಪಟ್ಟಣದ ಹುಡುಗರ ಆಡುಕೊಳ್ಳುವ ಹಾಗು ಅವಮಾನವನ್ನ ಮೊದಲು ಎದುರಿಸಬೇಕು. ಆಮೇಲೆ ಪಠ್ಯಕ್ರಮಕ್ಕೆ!
ಪ್ರಾಥಮಿಕ ಮಟ್ಟದಲ್ಲಿ ಮಕ್ಕಳಿಗೆ ಅಂಗ್ಲ ಭಾಷೆ ಬೇಕು ಅಂತ ಒಂದೆರಡು ವರ್ಷಗಳ ಹಿಂದೆ ವಾದ ವಿವಾದಗಳು ನಡೆದು ಅಂಗ್ಲ ಭಾಷೆ ಸೇರ್ಪಡೆ ಆಗುತ್ತದೆಂಬ ಆಶಯ ದಿನಪತ್ರಿಕೆಗಳಲ್ಲಿ ಬಂದಾಗ ನಾನು ಖುಷಿಪಟ್ಟೆ. ಈಗ ನಮ್ಮ ಹಳ್ಳಿಯ ಮಕ್ಕಳೂ ಕೂಡ ದಿಳ್ಳಿಯ ಮಕ್ಕಳೊಂದಿಗೆ ಸರಿಸಮವಾಗಿ ನಿಲ್ಲಲು ಅಷ್ಟೇನೂ ಕಷ್ಟವಾಗಲಿಕ್ಕಿಲ್ಲ ಅಂತ. ಆದರೆ ಅದಿನ್ನೂ ಆಗಿಲ್ಲ. ನಾನಿಲ್ಲಿ ಕನ್ನಡಾಭಿಮಾನಿಗಳ ವಿರೋಧವಾಗಿ ಮಾತಾಡುತ್ತಿಲ್ಲ. ಕನ್ನಡವೇ ಮಾಧ್ಯಮವಾಗಲಿ ಆದ್ರೆ ಅಂಗ್ಲ ಭಾಷೆ ಕೂಡ ಮಕ್ಕಳು ಓದಬೇಕು. ಅವರ ಭಾಷಾಕೋಶಗಳು ವಿಕಾಸವಾಗಬೇಕು. ಆಂಗ್ಲಭಾಷೆ ನಮಗೇಕೆ ಬೇಕು ಅಂತ ಅದನ್ನ ಚೆನ್ನಾಗಿ ಬಲ್ಲವ ಕೆಲವರು ಹೇಳಿದರೆ – ಕೆಲ ಹೊರದೇಶಗಳು ಅವುಗಳ ಭಾಷೆಯಷ್ಟೆಯೇ ಕಲಿಯುವುದಿಲ್ಲವೇ ಅಂತ ವಾದ ಮಾಡಬಹುದು. ಆವೆಲ್ಲ ನನ್ನ ಮಟ್ಟಿಗೆ ನಿಷ್ಪ್ರಯೋಜಕ ಮಾತುಗಳು. ಪ್ರತಿಯೊಬ್ಬ ಮಗುವಿಗೂ ಮುಂದೆ ಬರಬೇಕು ಅನ್ನೊ ಹಂಬಲವಿರುತ್ತೆ. ಅದಕ್ಕೆ ಅನುಗುಣವಾದ ವಿಧ್ಯಾಭ್ಯಾಸ ಸಿಗಬೇಕು.
ಒಂದುಕಡೆ ಓದಿದೆ, ಎಲ್ಲಾ ಉನ್ನತ ಶಿಕ್ಷಣ, IT ಮೊದಲುಗೊಂಡು ಅಲ್ಲವೂ ಕನ್ನಡದಲ್ಲೇ ಇರಬೇಕು ಅಂತ. ಅದು ತುಂಬಾ ಒಳ್ಳೆಯದೇ. ಆದರೆ ಈ IT ಅನ್ನೋದನ್ನ ಪ್ರಾರಭಿಸಿದವರು ಅಂಗ್ಲರು. ಆದು ಎಲ್ಲಾಇರೋದು ಅಂಗ್ಲಭಾಷೆಯಲ್ಲಿ. ಅದು ಕನ್ನಡದಲ್ಲಿ ಈಗ ಆಗಬೇಕೆಂದರೆ ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡಬೇಕು. ಅದನ್ನ ಕನ್ನಡಕ್ಕೆ ತರ್ಜಿಮೆ ಮಾಡೋಕೆ ಕನ್ನಡ ಹಾಗೂ ಅಂಗ್ಲಭಾಷೆ ಎರಡನ್ನೂ ಚೆನ್ನಾಗಿಬಲ್ಲವರು ಬೇಕು. ಹೌದಲ್ಲವೆ?? ಇಲ್ಲಿ ಅಂಗ್ಲಭಾಷೆಯ ಕೊರತೆ ಕಾಣುತ್ತಿಲ್ಲವೇ? ನಮ್ಮದೇ ಭಾಷೆಯಲ್ಲಿ ಕಲಿತ ಮಕ್ಕಳು ಅದನ್ನ ತಮ್ಮ ಭಾಷೆಗಷ್ಟೇ ಅಳವಡಿಸಲು ಸಾಧ್ಯ. ಅಷ್ಟಕ್ಕೇ ಸೀಮಿತವಾಗಲಿಲ್ಲವೇ ಅವರು ಕಲಿತದ್ದು? ಅಲ್ಲಿ ಮತ್ತೆ ಅವರ ಅನುಭವ ಹಾಗೂ ಬುದ್ಧಿಯನ್ನ ಹೊರಗೆ ಹಾಕಲು ಮತ್ತೆ ಈ ಭಾಷೆ ಅಡ್ಡವಾಗಿನಿಂತಿತೇ? ಅದು ಬೇಡ. ನಮ್ಮವರು ಕನ್ನಡ ಕಲಿಯಲಿ, ಬೆಳೆಸಲಿ.. ಅದೇ ಸಮಯದಲ್ಲಿ ಪ್ರತಿಯೊಬ್ಬನಿಗೂ ಅವರದೇ ಕ್ಷೇತ್ರದಲ್ಲಿ ಬೆಳೆಯಲು ಬೇಕಾದ ಅಂಗ್ಲವೂ ಸಿಗಲಿ ಅನ್ನೋದೇ ನನ್ನ ಅಶಯ. ಸುಮ್ಮನೆ ಇಂಥಾ ದೊಡ್ಡ ದೊಡ್ಡ ಮಾತುಗಳನ್ನ ಆಡುವುದು ಸುಲಭ; ಅದನ್ನ ಬೇರೆ ದೃಷ್ಟಿಯಲ್ಲೊ ನೋಡ್ಬೇಕು. ನಮ್ಮ ಮಕ್ಕಳು ಬೆಳೆಯೋಕೆ ಬೇಕಾದ್ದರ ಬಗ್ಗೆ ಯೋಚಿಸಬೇಕು. ಕೇವಲ ಭಾಷಾವಾದಿಗಳ ಕೈಲಿ ಸಿಕ್ಕಿ ಮಕ್ಕಳ ಭವಿಷ್ಯ ಹಾಳಾಗಬರದು ಅಲ್ಲವೆ?
Showing posts with label Thought Provoking. Show all posts
Showing posts with label Thought Provoking. Show all posts
Tuesday, August 21, 2007
Thursday, August 02, 2007
ಆಸೆ... ನೂರು ಆಸೆ...
ಎಷ್ಟು ಆಸೆ ಒಳ್ಳೆಯದು?
ಅದಕ್ಕೂ ಮೊದಲು ಯೋಚಿಸಬೇಕಾದದ್ದು - ಆಸೆ ಪಡುವುದು ಒಳ್ಳೆಯದೆ?
ನನ್ನನ್ನ ಕೇಳಿದರೆ, ಆಸೆ ಪಡಬೇಕು ಸ್ವಾಮಿ. ಆಸೆ ಇಲ್ಲದಿದ್ರೆ ಜೀವನದಲ್ಲಿ ಏನಿದೆ? ಇವನೇನು ದೊಡ್ಡಮನುಷ್ಯ ಆಸೆ ಬಗ್ಗೆ ಮಾತಾಡ್ತಿದ್ದನೆ ಅನ್ನಬೇಡಿ. ನಾನೇನು ದೊಡ್ಡವನಲ್ಲ. ಆದ್ರೆ ಆಸೆ ಅನ್ನೋದು ಎಲ್ಲರಿಗೂ ಹತ್ತಿರದ ವಿಷಯ. ಹಾಗಾಗಿ ನನ್ನ ಅನಿಸಿಕೆ ಹೇಳ್ತಿದ್ದೀನಿ ಅಷ್ಟೆ. ಯಾರಿಗೆ ಆಸೆ ಇಲ್ಲ ಹೇಳಿ? ಪ್ರತಿಯೊಬ್ಬರಿಗೂ ಇದೆ. ಎಲ್ಲಾರೂ ಒಂದಲ್ಲ ಒಂದು ರೀತಿಯಲ್ಲಿ ಆಸೆಗೊಳಗಾಗಿಯೇ ಇರುತ್ತಾರೆ. ನೀವು ಬುದ್ಧ ಅಂತ ಪ್ರಶ್ನಿಸಬಹುದು. ಅವನಿಗೂ ಒಂದು ಆಸೆ ಇತ್ತು - ಪ್ರಪಂಚದವರೆಲ್ಲರಿಗೂ ’ಆಸೆ ಅಂದ್ರೇನು, ಅದರ ಬಗ್ಗೆ ತಿಳಿಸಿಕೊಡಬೇಕು’ ಅಂತ. ’ಆಸೆಯೇ ದುಃಖಕ್ಕೆ ಮೂಲ’ ಅನ್ನುವ ಅವನ ಬೋಧನೆ ಎಲ್ಲರಿಗೂ ಅರ್ಥವಾಗಬೇಕು ಅಂತ :). ಬುದ್ಧ ಹೇಳಿದ ಆಸೆಗೂ ನಾವೆಲ್ಲಾ ಸಾಮಾನ್ಯವಾಗಿ ಇಟ್ಟುಕೊಂದಿರೋ ಆಸೆಗೂ ವ್ಯತ್ಯಾಸವಿರಬಹುದು. ಆದು ಬಿಡಿ.
ಆಸೆ ಇದ್ರೇನೆ ಜೀವನದಲ್ಲಿ ನಾವೆಲ್ಲಾ ಏನಾದ್ರೂ ಸಾಧಿಸಕ್ಕೆ ಸಾಧ್ಯ ಅನ್ನೋದು ನನ್ನ ಅನಿಸಿಕೆ. ಜೀವನದಲ್ಲಿ ಒಂದು ’ಗುರಿ’ ಇಟ್ಟುಕೊಬೇಕು ಅಂತ ನಮ್ಮ ದೊಡ್ಡವರು ಹೇಳಿದ್ದು ಅದನ್ನೇ. ಅಲ್ಲಿ ಗುರಿಯೆ ನಮ್ಮ ಆಸೆ. ಅದನ್ನ ನಾವು ಏನಾದ್ರು ಮಾಡಿ ಸಾಧಿಸಬೇಕು. ಸಾಮಾನ್ಯವಾಗಿ ನಾವೆಲ್ಲ ಪ್ರಸಕ್ತ ಆಸಕ್ತಿಯೇನಿದೆಯೊ ಅದರಸಂಬಂಧವಷ್ಟೇ ಗುರಿ ಇಟ್ಟಿರುತ್ತೇವೆ. Schoolನಲ್ಲಿ ಓದೋರಿಗೆ ಒಳ್ಳೆ collegeನಲ್ಲಿ ಓದೋ ಗುರಿ, collegeನಲ್ಲಿರೋರ್ಗೆ ಒಳ್ಳೆಕಡೆ ಕೆಲಸ ಮಾಡೊ ಗುರಿ, ಆಮೇಲೆ ಅದರಲ್ಲಿ ಮುಂದೆ-ಮುಂದೆ ಹೋಗಿ ಹೆಚ್ಚು-ಹೆಚ್ಚು ಹಣ ಸಂಪಾದಿಸೊ ಗುರಿ.. ಹೀಗೆ ಹಲವಾರು ಇರುತ್ತೆ. ಅದೇ ಗುರಿ/ಆಸೆ ನಮ್ಮ ಶಕ್ತಿಗೆ ಮೀರಿ ಇಟ್ಟುಕೊಂಡಾಗ ನಾವೆಲ್ಲ ಸಾಕಷ್ಟು ಸಾಧಿಸಲು ಸಾಧ್ಯ. ಅದೇ ನಮ್ಮ ಶಕ್ತಿಗೆ ವಿಪರೀತ ಮೀರಿದರೆ? ನಮ್ಮ ಆಸೆ ನಮ್ಮ ಮಿತಿಯಲ್ಲಿದ್ದರೆ ಒಳ್ಳೆಯದು. ಆಗ ನಾವು ನಮ್ಮ ಗುರಿ ತಲುಪಲು ಪ್ರತಿಯೊಂದು ಹೆಜ್ಜೆ ಹೇಗಿಡಬೇಕು ಅಂತ planಮಾಡಬಹುದು. ಮತ್ತೆ ಅದೇ plan ಪ್ರಕಾರ ಹೆಜ್ಜೆ ಇಡಬಹುದು. ಪ್ರತೀ ಹೆಜ್ಜೆಯಲ್ಲೂ ಮುಂದಿನ ಹೆಜ್ಜೆಗೆ ತಲುಪಲು ಆಸೆ ಇರಬೇಕು. ಆಗಷ್ಟೇ ಮುಂದಿನ ಹೆಜ್ಜೆ ತಲುಪಲು ಸಾಧ್ಯ. ಪ್ರತಿಯೊಂದು ಹೆಜ್ಜೆಗೂ ಅದರದ್ದೇ ಆದ ಸ್ವರೂಪ ಇದೆ. ಅದಕ್ಕೇ ಆ ಗುರಿ ತಲುಪಲು ಅದರದೇ ಸಮಯ ತಗೋತಿವಿ. ಅದನ್ನ ಮುಗಿಸಿ ಮುಂದೆ ಹೋಗಬೇಕು. ಆದರೆ ಮೊದಲನೇ ಹೆಜ್ಜೆ ಇಂದ ಐದನೇ ಹೆಜ್ಜೆಗೆ ಅನಾಮತ್ತಾಗಿ ಹೋಗಲು ಸಾಧ್ಯನ? ಸಾಧ್ಯ ಇರಬಹುದು - ಆದ್ರೆ ಸ್ವಲ್ಪ ಕಷ್ಟಕರ. ಅದು ಅವರವರ ಸಾಮರ್ಥ್ಯದ ಮೇಲೆ ಅವಲಂಬಿಸಿರುತ್ತೆ. ತುಂಬಾ ಅಭ್ಯಾಸ ಮಾಡಬೇಕು. ಕ್ರಮೇಣ ನಮ್ಮ ಸಾಮರ್ಥ್ಯದ ಜೊತೆಜೊತೆಗೆ ನಮ್ಮ ಭರಾಟೆ ಹೆಚ್ಚಿಸಿಕೊಳ್ಳಬೇಕು. ಆಗ ಒಮ್ಮೆಗೇ ಐದು ಹೆಜ್ಜೆ ಮುಂದೆ ಹೋಗಬಹುದು. ಇಲ್ಲದಿದ್ದಲ್ಲಿ ಮಧ್ಯದಲ್ಲಿ ಬೀಳುವ ಸಾಧ್ಯತೆಗಳೇ ಹೆಚ್ಚು. ಅದು ಸರಿ! ಏನೂ ತೊಂದರೆಯಿಲ್ಲ. ಯಾಕಂದ್ರೆ ಮುಂದೆನೇತಾನೆ ಇದ್ದೀವಿ. ಮತ್ತೆ ಮುಂದುವರಿಸೋಣ. ಆದ್ರೆ ಎರಡು ಹೆಜ್ಜೆಗಳ ಮಧ್ಯ ಬಿದ್ದು ಹಿಂದೆ-ಮುಂದೆ ಹಿಡಿಯಲು ಆಗದೇ ಪೆಟ್ಟಾದ್ರೆ? ಅಲ್ಲಿದೆ ಸ್ವಾಮಿ ತೊಂದರೆ! ಅದಕ್ಕೇ ಸರಿಯಾದ planningಬೇಕು. ಜೊತೆಗೆ ಸಾಧನೆ. ನಮ್ಮ ಆಸೆ ಏನಿದೆ ಅದು ನಮ್ಮ ಶಕ್ತಿಗೆ ಅನುಗುಣವಾಗಿದ್ದರೆ ಕ್ಷೇಮ. ಇಲ್ಲದಿದ್ದಲ್ಲಿ ಕಷ್ಟವಾದೀತು. ಎರಡು ಹೆಜ್ಜೆಗಳ ಮಧ್ಯ ಬಿದ್ದು ಪೆಟ್ಟಾಗಿ ಮತ್ತೆ ಎದ್ದು ನಮ್ಮ ಹಾದಿ ಸೇರಲು ತುಂಬಾ ಸಮಯ ತಗೊಂಡಾಗ ನಮ್ಮ ಗುರಿ ಮುಟ್ಟಲು ನಾವಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತೆ. ಹಾಗಾಗಿ ಕ್ರಮಬದ್ಧವಾಗಿ ಮುಂದುವರಿಯುವುದು ಮುಖ್ಯ.
ನಾನು ಇದನ್ನ ಯಾಕೆ ನಿಮ್ಮಜೊತೆ ಹಂಚಿಕೊಬೇಕು ಅಂದುಕೊಂಡೆ ಅಂದ್ರೆ, ನಾವೆಲ್ಲಾ ಆಸೆಬುರುಕರೇ. ಆಸೆಯೇ ನಮ್ಮ ಜೀವಾಳ - ಅದರಲ್ಲೂ ಮಧ್ಯಮವರ್ಗದ ಜನರಿಗೆ. ಕೆಲವೊಮ್ಮೆ ನಮ್ಮ ಆಸೆಗಳು ಮಿತಿಮೀರಿ ಹೊಗುತ್ತವೆ. ಅದು ಹೇಗೆ ಅಂತಿರ? ನಮಗೆ ನಮ್ಮದೇ ಆಸೆಗಳು ಒಂದಾದ್ರೆ ಮತ್ತೊಂದು ವರ್ಗ - ಬೇರೆಯವರನ್ನು ನೋಡಿ ಬರೋದು. ಸಾಮಾನ್ಯವಾಗಿ ಸುಮಾರು ನಮ್ಮದೇ ಸುತ್ತ ಮುತ್ತ, ಸ್ನೇಹಿತರು, ಗುರುತು-ಪರಿಚಯ ಇರೋರನ್ನೆಲ್ಲಾ ನೋಡಿ ನಮ್ಮಲ್ಲೇ ಒಂದು ಪ್ರಚಂಡ ಆಸೆ ಅಂಕುರಿಸುತ್ತೆ. ಇಲ್ಲಿ ನಾವು ನಮ್ಮನ್ನ ಅವರ ಜೊತೆ ಹೋಲಿಸಿ ನೋಡಿ ನಾವೂ ಯಾಕೆ ಅವರಂತೆನೇ ಇರಬಾರದು ಅಂತ ಅನ್ನಿಸೋದು ಸಹಜ. ಹೋಲಿಸುವ ಮನೋವೃತ್ತಿ ಆಸೆಯ ಮತ್ತೊಂದು ರೂಪ ಅನ್ನಬಹುದೇನೊ. ಆಸೆ ಇರತ್ತೊ ಬಿಡತ್ತೊ, ಒಮ್ಮೆ ನೀವು ಮತ್ತೊಬ್ಬರ ಜೊತೆ compareಮಾಡಿ ’ನಾನೇನು ಕಮ್ಮಿ’ ಅನ್ನೊ ಮನೋವೃತ್ತಿಗೆ ಬಂದ್ರೊ, ಕೆಲಸ ಕೆಟ್ಟಿತು ಅಂತಂದ್ಕೊಳ್ಳಿ. ಆದು ನಮ್ಮ ಶಕ್ತಿಯ ಒಳಗಿದ್ದರೆ ಏನೂ ತೊಂದರೆಯಿಲ್ಲ ಬಿಡಿ. ಅದಲ್ಲದೆ ಇದ್ದಲ್ಲಿ ಮಾತ್ರ ಕಷ್ಟ. ಬರ್ಲಿ ಬಿಡಿ ಸ್ವಾಮಿ, ತಪ್ಪೇನು? ಮೇಲೆ ಹೆಳಿದಹಾಗೆ ಆಸೆ ಇಲ್ಲದಿದ್ರೆ ಜೀವನದಲ್ಲಿ ಏನಿದೆ; ಮುಂದೆ ಬರೋಕೆ ಆಸೆಪಡೋದು ಮುಖ್ಯ ಅಲ್ವ? ಹೌದು ಸ್ವಾಮಿ ಹೌದು. ಆದ್ರೆ ನಾನು ಹೆಳಿದ್ದು ಇಷ್ಟೆ. ನಮ್ಮ ಹೋಲಿಕೆ ಆರೋಗ್ಯಕರವಾಗಿರಬೇಕು. ಅದು ಯಾವಾಗಲೂ ಅಸೂಯೆ/ಜಿದ್ದೆನಿಂದ ಬಂದಿದ್ದಾಗಬಾರದು. ನನ್ನನ್ನ ಕೇಳಿದರೆ, compareರೇ ಮಾದಿಕೊಳ್ಳಬಾರದು. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮುಂದಿರುತ್ತೇವೆ; ಒಳ್ಳೆಯ ಗುಣಗಳಿರುತ್ತವೆ.. ನಮ್ಮ comparison ನಮ್ಮ ಬೆಳವಣಿಗೆಗೆ ಪೂರಕವಾಗಿದ್ದರೆ ಚೆನ್ನ. ಅಲ್ಲದಿದ್ದರೆ - ನನಗೆ ನನ್ನಡದ ಒಂದು ಗಾದೆ ಜ್ಞಾಪಕಕ್ಕೆ ಬರ್ತಿದೆ: ನವಿಲು ಕುಣಿಯಿತು ಅಂತ ಕೆಂಬೂತ ಪುಕ್ಕ ಕೆದರಿಕೊಳ್ತು ಅಂತ. ಹಾಗಾಗತ್ತೆ! ಅದಕ್ಕೆ ನಾವು ಅವಕಾಶ ಕೊಡಬಾರದು ಅಲ್ವ? ಯಾರಿಗೆ ಎಷ್ಟು ಲಭ್ಯವೋ ಅಷ್ಟೇರೀ ಸಿಗೋದು. ಹಾಗಂತ ಕೈ ಕಟ್ಟಿ ಕುಳಿತುಕೊಳ್ಳಿ ಅಂತ ಹೇಳ್ತಿಲ್ಲ. ನಮ್ಮ ಪ್ರಯತ್ನ ನಾವು ಮಾಡಲೇ ಬೇಕು. ಹಾಗೆ ಮಾಡಿಯೂ ನಮ್ಮ ಆಸೆ ನೆರವೇರದಿದ್ದಲ್ಲಿ ಅದನ್ನ ಅಲ್ಲಿಗೇ ಬಿಟ್ಟು ಮುಂದೆ ನಡೆಯ ಬೇಕು - ಮತ್ತೊಂದು ಆಸೆ ಕಟ್ಟಿ. ಯಾವಾಗಲೂ ಮುಂದೆ ನೋಡಿ.. ಹೀಗಾಯ್ತಲ್ಲ ಅಂತ ತಲೆ ಮೇಲೆ ಕೈಹೊತ್ತು ಕೂರಬೇಡಿ.
ಆಸೆ ಪಡೋಣ. ಆದ್ರೆ ನಮ್ಮ limits ಗೊತ್ತಿರಲಿ.
ನಮ್ಮನ್ನ ಹೋಲಿಸಿಕೊಳ್ಳೋಣ. ಆದ್ರೆ ಅದು ಆರೋಗ್ಯಕರವಾಗಿರಲಿ (healthy comparison).
ಯಾವಾಗಲೂ factsನ ಒಪ್ಪಿಕೊಳ್ಳೊ ಮನೋಭಾವ ಬೆಳೆಸಿಕೊಳ್ಳೋಣ.
ಏನಂತೀರ??
ಅದಕ್ಕೂ ಮೊದಲು ಯೋಚಿಸಬೇಕಾದದ್ದು - ಆಸೆ ಪಡುವುದು ಒಳ್ಳೆಯದೆ?
ನನ್ನನ್ನ ಕೇಳಿದರೆ, ಆಸೆ ಪಡಬೇಕು ಸ್ವಾಮಿ. ಆಸೆ ಇಲ್ಲದಿದ್ರೆ ಜೀವನದಲ್ಲಿ ಏನಿದೆ? ಇವನೇನು ದೊಡ್ಡಮನುಷ್ಯ ಆಸೆ ಬಗ್ಗೆ ಮಾತಾಡ್ತಿದ್ದನೆ ಅನ್ನಬೇಡಿ. ನಾನೇನು ದೊಡ್ಡವನಲ್ಲ. ಆದ್ರೆ ಆಸೆ ಅನ್ನೋದು ಎಲ್ಲರಿಗೂ ಹತ್ತಿರದ ವಿಷಯ. ಹಾಗಾಗಿ ನನ್ನ ಅನಿಸಿಕೆ ಹೇಳ್ತಿದ್ದೀನಿ ಅಷ್ಟೆ. ಯಾರಿಗೆ ಆಸೆ ಇಲ್ಲ ಹೇಳಿ? ಪ್ರತಿಯೊಬ್ಬರಿಗೂ ಇದೆ. ಎಲ್ಲಾರೂ ಒಂದಲ್ಲ ಒಂದು ರೀತಿಯಲ್ಲಿ ಆಸೆಗೊಳಗಾಗಿಯೇ ಇರುತ್ತಾರೆ. ನೀವು ಬುದ್ಧ ಅಂತ ಪ್ರಶ್ನಿಸಬಹುದು. ಅವನಿಗೂ ಒಂದು ಆಸೆ ಇತ್ತು - ಪ್ರಪಂಚದವರೆಲ್ಲರಿಗೂ ’ಆಸೆ ಅಂದ್ರೇನು, ಅದರ ಬಗ್ಗೆ ತಿಳಿಸಿಕೊಡಬೇಕು’ ಅಂತ. ’ಆಸೆಯೇ ದುಃಖಕ್ಕೆ ಮೂಲ’ ಅನ್ನುವ ಅವನ ಬೋಧನೆ ಎಲ್ಲರಿಗೂ ಅರ್ಥವಾಗಬೇಕು ಅಂತ :). ಬುದ್ಧ ಹೇಳಿದ ಆಸೆಗೂ ನಾವೆಲ್ಲಾ ಸಾಮಾನ್ಯವಾಗಿ ಇಟ್ಟುಕೊಂದಿರೋ ಆಸೆಗೂ ವ್ಯತ್ಯಾಸವಿರಬಹುದು. ಆದು ಬಿಡಿ.
ಆಸೆ ಇದ್ರೇನೆ ಜೀವನದಲ್ಲಿ ನಾವೆಲ್ಲಾ ಏನಾದ್ರೂ ಸಾಧಿಸಕ್ಕೆ ಸಾಧ್ಯ ಅನ್ನೋದು ನನ್ನ ಅನಿಸಿಕೆ. ಜೀವನದಲ್ಲಿ ಒಂದು ’ಗುರಿ’ ಇಟ್ಟುಕೊಬೇಕು ಅಂತ ನಮ್ಮ ದೊಡ್ಡವರು ಹೇಳಿದ್ದು ಅದನ್ನೇ. ಅಲ್ಲಿ ಗುರಿಯೆ ನಮ್ಮ ಆಸೆ. ಅದನ್ನ ನಾವು ಏನಾದ್ರು ಮಾಡಿ ಸಾಧಿಸಬೇಕು. ಸಾಮಾನ್ಯವಾಗಿ ನಾವೆಲ್ಲ ಪ್ರಸಕ್ತ ಆಸಕ್ತಿಯೇನಿದೆಯೊ ಅದರಸಂಬಂಧವಷ್ಟೇ ಗುರಿ ಇಟ್ಟಿರುತ್ತೇವೆ. Schoolನಲ್ಲಿ ಓದೋರಿಗೆ ಒಳ್ಳೆ collegeನಲ್ಲಿ ಓದೋ ಗುರಿ, collegeನಲ್ಲಿರೋರ್ಗೆ ಒಳ್ಳೆಕಡೆ ಕೆಲಸ ಮಾಡೊ ಗುರಿ, ಆಮೇಲೆ ಅದರಲ್ಲಿ ಮುಂದೆ-ಮುಂದೆ ಹೋಗಿ ಹೆಚ್ಚು-ಹೆಚ್ಚು ಹಣ ಸಂಪಾದಿಸೊ ಗುರಿ.. ಹೀಗೆ ಹಲವಾರು ಇರುತ್ತೆ. ಅದೇ ಗುರಿ/ಆಸೆ ನಮ್ಮ ಶಕ್ತಿಗೆ ಮೀರಿ ಇಟ್ಟುಕೊಂಡಾಗ ನಾವೆಲ್ಲ ಸಾಕಷ್ಟು ಸಾಧಿಸಲು ಸಾಧ್ಯ. ಅದೇ ನಮ್ಮ ಶಕ್ತಿಗೆ ವಿಪರೀತ ಮೀರಿದರೆ? ನಮ್ಮ ಆಸೆ ನಮ್ಮ ಮಿತಿಯಲ್ಲಿದ್ದರೆ ಒಳ್ಳೆಯದು. ಆಗ ನಾವು ನಮ್ಮ ಗುರಿ ತಲುಪಲು ಪ್ರತಿಯೊಂದು ಹೆಜ್ಜೆ ಹೇಗಿಡಬೇಕು ಅಂತ planಮಾಡಬಹುದು. ಮತ್ತೆ ಅದೇ plan ಪ್ರಕಾರ ಹೆಜ್ಜೆ ಇಡಬಹುದು. ಪ್ರತೀ ಹೆಜ್ಜೆಯಲ್ಲೂ ಮುಂದಿನ ಹೆಜ್ಜೆಗೆ ತಲುಪಲು ಆಸೆ ಇರಬೇಕು. ಆಗಷ್ಟೇ ಮುಂದಿನ ಹೆಜ್ಜೆ ತಲುಪಲು ಸಾಧ್ಯ. ಪ್ರತಿಯೊಂದು ಹೆಜ್ಜೆಗೂ ಅದರದ್ದೇ ಆದ ಸ್ವರೂಪ ಇದೆ. ಅದಕ್ಕೇ ಆ ಗುರಿ ತಲುಪಲು ಅದರದೇ ಸಮಯ ತಗೋತಿವಿ. ಅದನ್ನ ಮುಗಿಸಿ ಮುಂದೆ ಹೋಗಬೇಕು. ಆದರೆ ಮೊದಲನೇ ಹೆಜ್ಜೆ ಇಂದ ಐದನೇ ಹೆಜ್ಜೆಗೆ ಅನಾಮತ್ತಾಗಿ ಹೋಗಲು ಸಾಧ್ಯನ? ಸಾಧ್ಯ ಇರಬಹುದು - ಆದ್ರೆ ಸ್ವಲ್ಪ ಕಷ್ಟಕರ. ಅದು ಅವರವರ ಸಾಮರ್ಥ್ಯದ ಮೇಲೆ ಅವಲಂಬಿಸಿರುತ್ತೆ. ತುಂಬಾ ಅಭ್ಯಾಸ ಮಾಡಬೇಕು. ಕ್ರಮೇಣ ನಮ್ಮ ಸಾಮರ್ಥ್ಯದ ಜೊತೆಜೊತೆಗೆ ನಮ್ಮ ಭರಾಟೆ ಹೆಚ್ಚಿಸಿಕೊಳ್ಳಬೇಕು. ಆಗ ಒಮ್ಮೆಗೇ ಐದು ಹೆಜ್ಜೆ ಮುಂದೆ ಹೋಗಬಹುದು. ಇಲ್ಲದಿದ್ದಲ್ಲಿ ಮಧ್ಯದಲ್ಲಿ ಬೀಳುವ ಸಾಧ್ಯತೆಗಳೇ ಹೆಚ್ಚು. ಅದು ಸರಿ! ಏನೂ ತೊಂದರೆಯಿಲ್ಲ. ಯಾಕಂದ್ರೆ ಮುಂದೆನೇತಾನೆ ಇದ್ದೀವಿ. ಮತ್ತೆ ಮುಂದುವರಿಸೋಣ. ಆದ್ರೆ ಎರಡು ಹೆಜ್ಜೆಗಳ ಮಧ್ಯ ಬಿದ್ದು ಹಿಂದೆ-ಮುಂದೆ ಹಿಡಿಯಲು ಆಗದೇ ಪೆಟ್ಟಾದ್ರೆ? ಅಲ್ಲಿದೆ ಸ್ವಾಮಿ ತೊಂದರೆ! ಅದಕ್ಕೇ ಸರಿಯಾದ planningಬೇಕು. ಜೊತೆಗೆ ಸಾಧನೆ. ನಮ್ಮ ಆಸೆ ಏನಿದೆ ಅದು ನಮ್ಮ ಶಕ್ತಿಗೆ ಅನುಗುಣವಾಗಿದ್ದರೆ ಕ್ಷೇಮ. ಇಲ್ಲದಿದ್ದಲ್ಲಿ ಕಷ್ಟವಾದೀತು. ಎರಡು ಹೆಜ್ಜೆಗಳ ಮಧ್ಯ ಬಿದ್ದು ಪೆಟ್ಟಾಗಿ ಮತ್ತೆ ಎದ್ದು ನಮ್ಮ ಹಾದಿ ಸೇರಲು ತುಂಬಾ ಸಮಯ ತಗೊಂಡಾಗ ನಮ್ಮ ಗುರಿ ಮುಟ್ಟಲು ನಾವಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತೆ. ಹಾಗಾಗಿ ಕ್ರಮಬದ್ಧವಾಗಿ ಮುಂದುವರಿಯುವುದು ಮುಖ್ಯ.
ನಾನು ಇದನ್ನ ಯಾಕೆ ನಿಮ್ಮಜೊತೆ ಹಂಚಿಕೊಬೇಕು ಅಂದುಕೊಂಡೆ ಅಂದ್ರೆ, ನಾವೆಲ್ಲಾ ಆಸೆಬುರುಕರೇ. ಆಸೆಯೇ ನಮ್ಮ ಜೀವಾಳ - ಅದರಲ್ಲೂ ಮಧ್ಯಮವರ್ಗದ ಜನರಿಗೆ. ಕೆಲವೊಮ್ಮೆ ನಮ್ಮ ಆಸೆಗಳು ಮಿತಿಮೀರಿ ಹೊಗುತ್ತವೆ. ಅದು ಹೇಗೆ ಅಂತಿರ? ನಮಗೆ ನಮ್ಮದೇ ಆಸೆಗಳು ಒಂದಾದ್ರೆ ಮತ್ತೊಂದು ವರ್ಗ - ಬೇರೆಯವರನ್ನು ನೋಡಿ ಬರೋದು. ಸಾಮಾನ್ಯವಾಗಿ ಸುಮಾರು ನಮ್ಮದೇ ಸುತ್ತ ಮುತ್ತ, ಸ್ನೇಹಿತರು, ಗುರುತು-ಪರಿಚಯ ಇರೋರನ್ನೆಲ್ಲಾ ನೋಡಿ ನಮ್ಮಲ್ಲೇ ಒಂದು ಪ್ರಚಂಡ ಆಸೆ ಅಂಕುರಿಸುತ್ತೆ. ಇಲ್ಲಿ ನಾವು ನಮ್ಮನ್ನ ಅವರ ಜೊತೆ ಹೋಲಿಸಿ ನೋಡಿ ನಾವೂ ಯಾಕೆ ಅವರಂತೆನೇ ಇರಬಾರದು ಅಂತ ಅನ್ನಿಸೋದು ಸಹಜ. ಹೋಲಿಸುವ ಮನೋವೃತ್ತಿ ಆಸೆಯ ಮತ್ತೊಂದು ರೂಪ ಅನ್ನಬಹುದೇನೊ. ಆಸೆ ಇರತ್ತೊ ಬಿಡತ್ತೊ, ಒಮ್ಮೆ ನೀವು ಮತ್ತೊಬ್ಬರ ಜೊತೆ compareಮಾಡಿ ’ನಾನೇನು ಕಮ್ಮಿ’ ಅನ್ನೊ ಮನೋವೃತ್ತಿಗೆ ಬಂದ್ರೊ, ಕೆಲಸ ಕೆಟ್ಟಿತು ಅಂತಂದ್ಕೊಳ್ಳಿ. ಆದು ನಮ್ಮ ಶಕ್ತಿಯ ಒಳಗಿದ್ದರೆ ಏನೂ ತೊಂದರೆಯಿಲ್ಲ ಬಿಡಿ. ಅದಲ್ಲದೆ ಇದ್ದಲ್ಲಿ ಮಾತ್ರ ಕಷ್ಟ. ಬರ್ಲಿ ಬಿಡಿ ಸ್ವಾಮಿ, ತಪ್ಪೇನು? ಮೇಲೆ ಹೆಳಿದಹಾಗೆ ಆಸೆ ಇಲ್ಲದಿದ್ರೆ ಜೀವನದಲ್ಲಿ ಏನಿದೆ; ಮುಂದೆ ಬರೋಕೆ ಆಸೆಪಡೋದು ಮುಖ್ಯ ಅಲ್ವ? ಹೌದು ಸ್ವಾಮಿ ಹೌದು. ಆದ್ರೆ ನಾನು ಹೆಳಿದ್ದು ಇಷ್ಟೆ. ನಮ್ಮ ಹೋಲಿಕೆ ಆರೋಗ್ಯಕರವಾಗಿರಬೇಕು. ಅದು ಯಾವಾಗಲೂ ಅಸೂಯೆ/ಜಿದ್ದೆನಿಂದ ಬಂದಿದ್ದಾಗಬಾರದು. ನನ್ನನ್ನ ಕೇಳಿದರೆ, compareರೇ ಮಾದಿಕೊಳ್ಳಬಾರದು. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮುಂದಿರುತ್ತೇವೆ; ಒಳ್ಳೆಯ ಗುಣಗಳಿರುತ್ತವೆ.. ನಮ್ಮ comparison ನಮ್ಮ ಬೆಳವಣಿಗೆಗೆ ಪೂರಕವಾಗಿದ್ದರೆ ಚೆನ್ನ. ಅಲ್ಲದಿದ್ದರೆ - ನನಗೆ ನನ್ನಡದ ಒಂದು ಗಾದೆ ಜ್ಞಾಪಕಕ್ಕೆ ಬರ್ತಿದೆ: ನವಿಲು ಕುಣಿಯಿತು ಅಂತ ಕೆಂಬೂತ ಪುಕ್ಕ ಕೆದರಿಕೊಳ್ತು ಅಂತ. ಹಾಗಾಗತ್ತೆ! ಅದಕ್ಕೆ ನಾವು ಅವಕಾಶ ಕೊಡಬಾರದು ಅಲ್ವ? ಯಾರಿಗೆ ಎಷ್ಟು ಲಭ್ಯವೋ ಅಷ್ಟೇರೀ ಸಿಗೋದು. ಹಾಗಂತ ಕೈ ಕಟ್ಟಿ ಕುಳಿತುಕೊಳ್ಳಿ ಅಂತ ಹೇಳ್ತಿಲ್ಲ. ನಮ್ಮ ಪ್ರಯತ್ನ ನಾವು ಮಾಡಲೇ ಬೇಕು. ಹಾಗೆ ಮಾಡಿಯೂ ನಮ್ಮ ಆಸೆ ನೆರವೇರದಿದ್ದಲ್ಲಿ ಅದನ್ನ ಅಲ್ಲಿಗೇ ಬಿಟ್ಟು ಮುಂದೆ ನಡೆಯ ಬೇಕು - ಮತ್ತೊಂದು ಆಸೆ ಕಟ್ಟಿ. ಯಾವಾಗಲೂ ಮುಂದೆ ನೋಡಿ.. ಹೀಗಾಯ್ತಲ್ಲ ಅಂತ ತಲೆ ಮೇಲೆ ಕೈಹೊತ್ತು ಕೂರಬೇಡಿ.
ಆಸೆ ಪಡೋಣ. ಆದ್ರೆ ನಮ್ಮ limits ಗೊತ್ತಿರಲಿ.
ನಮ್ಮನ್ನ ಹೋಲಿಸಿಕೊಳ್ಳೋಣ. ಆದ್ರೆ ಅದು ಆರೋಗ್ಯಕರವಾಗಿರಲಿ (healthy comparison).
ಯಾವಾಗಲೂ factsನ ಒಪ್ಪಿಕೊಳ್ಳೊ ಮನೋಭಾವ ಬೆಳೆಸಿಕೊಳ್ಳೋಣ.
ಏನಂತೀರ??
Wednesday, April 19, 2006
ಜೀವನ
ಮೊನ್ನೆ ಜಯನಗರದ ದೇವಸ್ಥಾನವೊಂದರಲ್ಲಿ ನನ್ನ ಚಪ್ಪಲಿ ಹಾಕಲು ಬಗ್ಗಿದಾಗ, "ನಾನು Insurance agentಉ" ಎಂದ ಒಂದು ಧ್ವನಿ ಕೇಳಿತು. ಕತ್ತು ಮೇಲೆತ್ತಿ ನೋಡಿದೆ. ೪೦ರ ಪ್ರಾಯದ ಒಬ್ಬರು ತಮ್ಮ ಕೈ ಹಿಂದೆ ಕಟ್ಟಿ ನಿಂತಿದ್ದರು: ಉಬ್ಬು ಹಲ್ಲು, ಅರ್ಧ ತೆರೆದ ಕಣ್ಣುಗಳು, summer cut ಗಿಂತಲೂ ಚಿಕ್ಕದಾದ ಕೂದಲುಗಳು, ಸಾಧಾರಣವಾದ ಬಟ್ಟೆ. ನನ್ನನ್ನು ನೋಡಿ, "ನಾನು Insurance agentಉ. ನಿಮ್ಮದು ಏನಾದ್ರು ಇದ್ರೆ ಮಾಡಿಸಿಕೊಡುತ್ತೀನಿ. ಮಾಡಿಸ್ತಿರ?" ಅಂದ್ರು. ತುಂಬ ದೀನ ಭಾವದಲ್ಲಿದ್ದವರನ್ನು ಕಂಡು ಒಂದು ಕ್ಷಣ ನನ್ನ ಮನಸ್ಸು ಅಯ್ಯೊ ಅಂತು. ಆದರೂ ನಾನು ಏನೂ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. "ನಾನು ಎಲ್ಲ ಮುಗಿಸಿಬಿಟ್ಟೆನಲ್ಲ, ಸ್ವಾಮಿ" ಅಂದೆ. ಅದಕ್ಕವರು, "ಹೌದೇ..." ಎಂದು ರಾಗ ಎಳೆದು "Post office RDನೂ ಮಾಡಿಸ್ತಿನಿ. ಬೇರೆ ಯಾರಿಗಾದರೂ ಬೇಕಿದ್ದರೆ ನಂಗೇ ಹೇಳಿ. ದೇವಸ್ಥಾನಕ್ಕೆ ಬರ್ತಿರ್ತೀರ ಅಲ್ವ?" ಎಂದರು. ಆಯಿತು ಎಂದು ಹೇಳಿ ನಾನು ಹೊರಬಿದ್ದೆ.
Insurance ಮಾಡಿಸಿ ಅಂತ ಬರೋರು ಸರ್ವೇ ಸಾಮಾನ್ಯ. ಆದರೆ ಇವರ ದೀನಸ್ಥಿತಿ ನೋಡಿ ನನ್ನ ಮನಸ್ಸು ಚುರುಕ್ ಅಂತು. ನಾವೇನೆ ಆದರೂ ಪರಿಸ್ಥಿತಿ ಮನುಷ್ಯನನ್ನು ಏನೆಲ್ಲ ಮಾಡಿಸುತ್ತದೆ ಅಲ್ಲವೆ? ಸ್ವಾಭಿಮಾನ ಅಡ್ಡಬರುವುದೇ ಇಲ್ಲವೆ ಇವರಿಗೆ? ಅವರ ವೃತ್ತಿ ಎಲ್ಲರನ್ನು ಕೇಳುವುದೇ ಇರಬಹುದು, ಆದರೆ ಈಗಿನ ಖಾಸಗಿ ಸಂಸ್ಥೆಗಳು ಇಂಥವರ ಹೊಟ್ಟೆಗೆ ಹೊಡೆಯುತ್ತಿದ್ದಾರೇನೊ ಅನ್ನಿಸುತ್ತದೆ. ಇಂಥ ಮನುಷ್ಯರನ್ನು ನೋಡಿ ನಗುವವರೆಷ್ಟೊ - ಆಡಿಕೊಳ್ಳುವವರೆಷ್ಟೊ. ಏನೇ ಆಗಲಿ ಜೀವನ ನಡೆಯಲೇ ಬೇಕಲ್ಲವೆ?
"ಉದರನಿಮಿತ್ತಂ ಬಹುಕೃತ ವೇಷಂ" - ಎಷ್ಟು ನಿಜ!
Insurance ಮಾಡಿಸಿ ಅಂತ ಬರೋರು ಸರ್ವೇ ಸಾಮಾನ್ಯ. ಆದರೆ ಇವರ ದೀನಸ್ಥಿತಿ ನೋಡಿ ನನ್ನ ಮನಸ್ಸು ಚುರುಕ್ ಅಂತು. ನಾವೇನೆ ಆದರೂ ಪರಿಸ್ಥಿತಿ ಮನುಷ್ಯನನ್ನು ಏನೆಲ್ಲ ಮಾಡಿಸುತ್ತದೆ ಅಲ್ಲವೆ? ಸ್ವಾಭಿಮಾನ ಅಡ್ಡಬರುವುದೇ ಇಲ್ಲವೆ ಇವರಿಗೆ? ಅವರ ವೃತ್ತಿ ಎಲ್ಲರನ್ನು ಕೇಳುವುದೇ ಇರಬಹುದು, ಆದರೆ ಈಗಿನ ಖಾಸಗಿ ಸಂಸ್ಥೆಗಳು ಇಂಥವರ ಹೊಟ್ಟೆಗೆ ಹೊಡೆಯುತ್ತಿದ್ದಾರೇನೊ ಅನ್ನಿಸುತ್ತದೆ. ಇಂಥ ಮನುಷ್ಯರನ್ನು ನೋಡಿ ನಗುವವರೆಷ್ಟೊ - ಆಡಿಕೊಳ್ಳುವವರೆಷ್ಟೊ. ಏನೇ ಆಗಲಿ ಜೀವನ ನಡೆಯಲೇ ಬೇಕಲ್ಲವೆ?
"ಉದರನಿಮಿತ್ತಂ ಬಹುಕೃತ ವೇಷಂ" - ಎಷ್ಟು ನಿಜ!
Subscribe to:
Posts (Atom)