Friday, May 15, 2009

ವಿಂಡೋಸ್ ಲೈವ್ ರೈಟರ್ ನಿಂದ ಬರೆದ ಮೊದಲ ಬ್ಲಾಗು

Microsoft Windows Live Writer ನಿಂದ ನಾವೀಗ Bloggerಗೆ ಬರದೆಯೆ ಬರೆಯಬಹುದು. ನನಗೆ ಇದರ ಬಗ್ಗೆ ಗೊತ್ತಾಗಿದ್ದು ಇವತ್ತಷ್ಟೆ. ಇದು ನಾವೆಲ್ಲಾ ಒಗ್ಗಿಹೋಗಿರೋ Wordಥರಾನೇ ಇದೆ. ಚಿತ್ರಗಳನ್ನ ಚೆನ್ನಾಗಿ ತೂರಿಸಬಹುದು.

ಇಲ್ಲಿಂದ ಇಳಿಸಿ ನಿಮ್ಮ ಕಂಪ್ಯೂಟರ್‍ನಲ್ಲಿ ಹಾಕಿ. ಮೊದಲು ನೀವು ನಿಮ್ಮ Bloggerನ ವಿವರ ಭರ್ತಿ ಮಾಡಿ. ಆಮೇಲೆ ಬರೆಯೋದು ತುಂಬಾ ಸುಲಭ.

clip_image001

ನಿಮ್ಮ Bloggerನ ವಿನ್ಯಾಸವನ್ನು Writer ಬದಲಿಸಲ್ಲ. ಅದೇವಿನ್ಯಾಸದಲ್ಲಿ ನಿಮಗೆ previewಕೂಡ ತೋರಿಸತ್ತೆ.

Sunday, March 29, 2009

ನಮ್ಮ ಮಾಡಿವಾಳ ಕೆರೆ

ಕೆರೆಗಳು ತುಂಬಾ ಚೆನ್ನಾಗಿರುತ್ತೆ ಅಲ್ವಾ? ಅದರಲ್ಲೂ ಸಂಜೆಯ ವೇಳೆ ಅದರ ದಂಡೆಯಲ್ಲಿ ಕೂತು ತಣ್ಣಾಗಿನ ಗಾಳಿ ಅನುಭವಿಸುವುದೇ ಒಂದು ಸುಂದರ ಅನುಭವ. ಇದೇ ದಿನಾ ನಾನು BTM Layoutನ ಕೆರೆ ಮುಂದೆ ಹೋಗುವಾಗ ಅಂದ್ಕೊಳ್ಳೋದು. ಎಷ್ಟು ದೊಡ್ಡ ಜಾಗ, ಎಷ್ಟು ಸುಂದರ ಪ್ರಕೃತಿ! BTM Layoutನ ಕೆರೆ ಅಂದ ತಕ್ಷಣ ನನಗನ್ನಿಸೋದು ಇಷ್ಟು ಚೆನ್ನಾಗಿರೋ ಜಾಗನ ನಾವು ಕಡೆಗಾಣಿಸಿದ್ದೇವಲ್ಲ ಅಂತ. ಇತ್ತೆಚೆಗೆ ಸರ್ಕಾರದವರು ಸ್ವಲ್ಪ ಗಮನ ಕೊಟ್ಟಿರೋಹಾಗಿದೆ. ಕೆರೆಯ ಒಂದು ಭಾಗವನ್ನ ಉದ್ಯಾನವನವಾಗಿಮಾಡುತ್ತಿದ್ದಾರೆ. ಬಹಳ ದಿನಗಳಿಂದ ಕೆಲಸ ನಡೆಯುತ್ತಿದ್ದರೂ ಮಾಡೋಕೆ ತುಂಬಾ ಇದೆ ಅನ್ನಿಸಿತು. ಕಳೆದ ಶನಿವಾರ ಸಂಜೆ ಅದರ ಮುಂದೆ ಹಾದುಹೋಗುವಾಗ ಬಹಳ ಜನಗಳು ಅದರ ಸುಖಾನುಭವ ಕಾಣುತ್ತಿದ್ದರು. ಅದನ್ನ ನೋದಿ ಇನ್ನೂ ಡೆವೆಲಪ್ ಮಾಡಿದ್ರೆ ಜನಗಳು ಅಲ್ಲಿಗೆ ಬರುತ್ತಾರೆ, ಆನಂದ ಪಡುತ್ತಾರೆ ಅನ್ನಿಸ್ತು. ಇನ್ನೊಂದು ವಿಶೇಷ ಈ ಕೆರೆಯದು ಅಂದ್ರೆ ಇದರ ಮಧ್ಯದಲ್ಲಿ ಒಂದು ದ್ವೀಪವಿದೆ. ವೀಕ್ಷಕರಿಗೆ ಅಲ್ಲಿಗೆ ಹೋಗೋ ಅವಕಾಶವಿದ್ರೆ ಹೇಗಿರುತ್ತೆ? ಅಥವಾ ಆ ದ್ವೀಪದಲ್ಲಿ ಒಂದು ಸುಂದರ ರೆಸ್ಟೋರೆಂಟ್ ಇದ್ರೆ? ಹಾಗಿದ್ರೆ ಪ್ರಣಯಿಗಳಿಗೆ ಅದಕ್ಕಿಂತ ಸುಂದರ ತಾಣ ಬೆಂಗಳೂರಿನಲ್ಲಿ ಬೇರೆಯಿರುತ್ತದೆಯೆ? ಹಾಳುಮಾಡದೇ ಉಳಿಸಿಕೊಳ್ಳಬೇಕಷ್ಟೇ! ಇಷ್ಟೇ ದೊಡ್ಡ ಕೆರೆ ಅಮೇರಿಕದಲ್ಲಿದ್ದಿದ್ರೆ ಅದಕ್ಕೆ ಎಷ್ಟೊಂದು ಬೆಲೆ ಕೊಡುತ್ತಿದ್ದರು ಅನ್ನಿಸುತ್ತೆ. ಅದನ್ನ ಒಂದು ಪ್ರವಾಸ ತಾಣವಾಗಿ ಮಾಡಿಬಿಡುತ್ತಿದ್ರು. ಆದ್ರೆ ನಮ್ಮ ಮಾಡಿವಾಳ ಕೆರೆ ಕಲೆಗಳಿಂದ, ಕೆಟ್ಟುನಿಂತಿರೋ ವಾಹನಗಳಿಗೆ, ಕೆಲ ಜನರ ಮಲ-ಮೂತ್ರ ವಿಸರ್ಜಿಸೋ ಜಾಗವಾಗಿದೆ! ಇದನ್ನ ನೋಡಿದ್ರೆ ಬೇಸರವಾಗೋಲ್ವೇ? ಅಷ್ಟೇ ಅಲ್ಲ, ಕೆಮಿಕಲ್ ತ್ಯಾಜ್ಯಕೂಡ ಅದರಲ್ಲಿ ವಿಸರ್ಜಿತವಾಗ್ತಿದೆಯಂತೆ!
ಒಮ್ಮೆ ಈ ಕೆರೆ ಹಲವು ಪಕ್ಷಿಗಳಿಗೆ ತಾಣವಾಗಿತ್ತಂತೆ. ಆದ್ರೆ ಈಗಲೂ ಈ ಪಕ್ಷಿಗಳು ಇಲ್ಲಿಗೆ ಬರುತ್ತಿವೆಯೇ? Times of India 2001 ರಲ್ಲಿ ಒಂದು ಲೇಖನ ಪ್ರಕಾಶಿಸಿತ್ತು. ಅದರಲ್ಲಿ ಬಹಳಷ್ಟು ವಿಷಯಗಳಿದೆ ಈ ಕೆರೆಯಬಗ್ಗೆ.

ಹಾಗೆ ಇಂಟೆರ್‌ನೇಟ್‌ನಲ್ಲಿ ಈ ಕೆರೆಯ ಬಗ್ಗೆ ಹುಡುಕಿದಾಗ, ಮುರಳಿ ಅಲಗಾರ್ ಅವರ ಕೆಲವು ಸುಂದರ photographs ಸಿಕ್ಕವು. ಮತ್ತೊಂದು ಲೇಖನ ಮತ್ತು ಫೋಟೋಗಳು. ನೀವೂ ನೋಡಿ ಆನಂದಿಸಿ! ಇಂಥಾ ಪಕ್ಷಿಗಳು ಇನ್ನೂ ಇಲ್ಲಿಗೆ ಬರುತ್ತಿವೆಯೇ? ಹೌದು ಅನ್ನಿಸತ್ತೆ: ಈ ಲೇಖನ ಓದಿ. ಇನ್ನೂ ಮುಂದೆಯೂ ಹಿಂದಿನಷ್ಟೇ ಪಕ್ಷಿಗಳು ಬರುತ್ತವೆಯೇ? ಈ ಪ್ರಶ್ನೆ ಗೆ ನನ್ನಲ್ಲಿ ಉತ್ತರವಿಲ್ಲ. ಕಂಡುಕೊಳ್ಳಲು ಪ್ರಯತ್ನಿಸಬೇಕಷ್ಟೆ!

ನಮ್ಮ ಘನ ಸರ್ಕಾರ ಬೆಂಗಳೂರಿನ ಹಲವು ಇಂಥಾ ಕೆರೆಯಗಳನ್ನ ಜೀರ್ಣೋಧ್ಧಾರ ಮಾಡಿ ಸುಂದರ ತಾಣಗಳನ್ನು ಉಳಿಸಿಕೊಳ್ಳಳಿ ಅನ್ನೋದೇ ನನ್ನ ಆಸೆ!

Thursday, February 26, 2009

ಪ್ರತಾಪ ಸಿಂಹರ ITಯ ಕುರುಡು ಕಾಂಚಣದ ಬಗ್ಗೆ ...

ಪ್ರೀತಿಯ ಪ್ರತಾಪ ಸಿಂಹರೆ,

ನಾನು ನಿಮ್ಮ ಅನೇಕ ಲೆಖನಗಳನ್ನು ಓದಿದ್ದೇನೆ - ಪ್ರತಿವಾರ ಓದುತ್ತೇನೆ ಅಂದ್ರೆ ತಪ್ಪಾಗುತ್ತೆ. ಹಲವಾರು ವಿಶಯ ನನಗೆ ಗೊತ್ತಿಲ್ಲದ್ದನ್ನು ನಿಮ್ಮ ಲೇಖನಗಳಿಂದ ತಿಳಿದುಕೊಂಡಿದ್ದೇನೆ. ನೀವು ನಮ್ಮವರೆಂದು ಹೆಮ್ಮೆ ಪಡುತ್ತೇನೆ (ನಾನು ಹೆಮ್ಮೆ ಪಡೊದ್ರಿಂದ ಅಥವ ಪಡದಿದ್ರೆ ನಿಮಗೆ ಯಾವ ಹಾನಿಯೂ ಇಲ್ಲ ಅನ್ನೋದು ಗೊತ್ತಿದೆ!). ಇವತ್ತು ನನ್ನ office ನಲ್ಲಿ ನಿಮ್ಮ ಕಳೆದ ಶನಿವಾರದ (February 21, 2009) ಲೇಖನದ ಬಗ್ಗೆ ಮಾತು ಬಂತು. ನಾನು ಓದಿರಲಿಲ್ಲ. ಈಗ ಅದನ್ನು ಓದಿದೆ, office ನಲ್ಲಿ ಸ್ವಲ್ಪ ಮಾತುಕತೆ ನಡೆದದ್ದರಿಂದ. ಓದಿದಮೇಲೆ, ಒಂದು ಉತ್ತರ ಬರೆಯಬೇಕು ಅನ್ನಿಸ್ತು. ಅದರ ಪ್ರಯತ್ನ ಅಷ್ಟೇ ಇದು.



Or look here: Article

ನಿಜವಾಗಿ ನಿಮ್ಮ ಲೇಖನ ನನಗೆ ಪ್ರತಿಕ್ರಿಯಿಸೋಹಾಗೆ ಮಾಡಿದೆ. ನಿಮ್ಮ ಲೆಖನ ಚೆನ್ನಾಗಿದೆ, ಐಟಿ ಜನಗಳನ್ನು ಕೋಪದಿಂದ ನೋಡೋ ಜನಗಳಿಗೆ ಅವರ ಕೋಪವನ್ನು ಇನ್ನಷ್ಟು ಕೇಚರಕ್ಕೇರಿಸುವಷ್ಟು! ಅದರಲ್ಲೊ ಕೆಲವು ಸಾಲುಗಳಂತೂ ಬೇಡವಾಗಿತ್ತು. ನಿಮ್ಮ ಲೇಖನ ಓದಿದ್ರೆ ನನಗೆ ಒಂದು ಗಾದೆ ನೆನಪಿಗೆ ಬಂತು: ’ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ’ ಅಂತ. ಚೆನ್ನಾಗಿದೆ ಸ್ವಾಮಿ! ನೀವು ಬರೆದಿರೋದು ಈಗಿನ ಎಲ್ಲಾ ಸಮಸ್ಯೆಗಳಿಗೂ ಐಟಿ ನೇ ಕಾರಣ ಅಂತ!! ನೀವು ಬಿಡಿಸಿಟ್ಟಿರೋ ಹಲವು ವಿಶಯಗಳು ಈ ಐಟಿ ಬರೋಕ್ಕೂ ಮುಂಚೆನೂ ಇತ್ತು.. ಅಲ್ವ? ರೋಡು ಚೆನ್ನಾಗಿಲ್ಲ, ಕರೆಂಟು ಅಭಾವ ಅನ್ನೋದು ಈಗ ಮಾತ್ರನ? ಅಥವ ಹಾಗೆ ಬೇಜಾರು ಮಾಡಿಕೊಳ್ತಾಇರೋರು ಕೇವಲ ಐಟಿನವರ? ನಮಗಿಂತ ಹೆಚ್ಚು ಈ ವಿಶಯಗಳನ್ನ ಬರೆಯುತ್ತಿರೋರು ಮೀಡಿಯಾದವರು ಸ್ವಾಮಿ. ನೀವೇಹೇಳಿರೋಹಾಗೆ, ಐಟಿಯವರಹತ್ರ ದುಡ್ಡಿದೆ, ಅವರೆಲ್ಲಾ ಇನ್ವರ್ಟರ್ ಹಾಕಿಸಿಕೊಂದಿದ್ದಾರೆ ಮನೆಗೆ; ಕರೆಂಟ್ ಅಭಾವ ಅವರಿಗೆ ಎಲ್ಲಿಗೊತ್ತಾಗತ್ತೆ ಮತ್ತೆ? :)

ದುರಹಂಕಾರ ಯಾರಿಗಿಲ್ಲ? ನಮ್ಮಪ್ಪ ಒಂದು ಹಳೇ ಮಾತಿಗೆ - ’ಅನ್ನ ಇದ್ರೆ ಪ್ರಾಣ, ಪ್ರಾಣ ಇದ್ರೆ ಪರಾಕ್ರಮ’ ಅನ್ನೋದಕ್ಕೆ ಒಂದು ಹೊಸ ಸಾಲು ಸೇರಿಸಿ ಹೇಳೋರು - ’ಪರಾಕ್ರಮ ಇದ್ರೆ ಗಾಂಚಾಲಿ’ ಅಂತ. Basic needs ಗಳಿಂದ ತ್ರುಪ್ತನಾದ ಯಾವನೇ ಮನುಷ್ಯ ಜಂಭ ತೋರಿಸೋದ್ರಲ್ಲಿ ಹೊಸತೇನಿಲ್ಲ. ನೀವು ಹೇಳಿದಹಾಗೆ ಪ್ರತಿ ಶ್ರೀಮಂತ-/ಹಣವಂತ-ನಿಗೂ ಇದೆ, ಹಾಗೆ ಅವರ ಲಾಡ್ಲಾಗಳಿಗೂ ಕೂಡ. ಈ ಐಟಿ ಬರೋಕೆ ಮುಂಚೆ ತುಂಬಾ ಸಂಬಳ ತಗೋತಿದ್ದದ್ದು ಬ್ಯಾಂಕ್-ನವರು. ಅವರೇನು ಯದ್ವಾತದ್ವಾ ಖರ್ಚು ಮಾಡ್ಲಿಲ್ಲ ಅಂತೀರ? ಬೆಂಗಳೂರಲ್ಲಿ ಅರ್ಧಕ್ಕರ್ಧ ಬ್ಯಾಂಕ್ ಲೇಔಟ್ ಗಳೇ ಇದೆ. ಅವೆಲ್ಲಾ ಹೆಂಗೆ ಆದ್ವು ಸರ್? ಹಾಗಂತ ಎಷ್ಟು ಐಟಿ ಲೇಔಟ್ಗಳಿವೆ? ಬ್ಯಾಂಕ್ ಉದ್ಯೋಗಿಗಳ ಖರ್ಚು ಯಾರಿಗೂ ಹೀಗೆ ಕಾಣಲಿಲ್ಲ ಯಾಕಂದ್ರೆ, ಅದು ಐಟಿನಷ್ಟು ಉದ್ಯೋಗ ಸೃಷ್ಟಿ ಮಾಡಲಿಲ್ಲ! ಜೊತೆಗೆ, ಪದವಿ ಮಾಡಿಕೊಂದ ತಕ್ಷಣ ಎಲ್ಲಾರಿಗೂ, ನೀವುಹೇಳಿದಂತೆನೇ, ಹಣ ಸಿಗಲಿಲ್ಲ. ಆಷ್ಟೆ! ಅಪ್ಪ ರೆಟೈರ್ ಆಗೊ ಹೊತ್ತಿನ ಸಂಬಳ ಮಗ ಶುರುನಲ್ಲೇ ಸಂಪಾದಿಸಿ ಸಂಪೂರ್ಣ ಮನೆ ನಿಭಾಯಿಸುತ್ತಾನೆ ಈಗ. ಇದಕ್ಕೆ ನಾನು ಬಹಳ ನಿದರ್ಶನ ಕೊಡಬಲ್ಲೆ. ಕಷ್ಟ ಪಡುತ್ತಿದ್ದ ಎಷ್ಟೋ ಸಂಸಾರಗಳು ಸ್ವಲ್ಪ ಉಸಿರಾಡುವ ಹಾಗೆ ಆಗಿದೆ ಈಗಿನ ಆರ್ಥಿಕಪರಿಸ್ಥಿತಿಯಿಂದ. ಆದನ್ನ ಬಿಟ್ಟು ಬರೇ ಋಣಾತ್ಮಕವಾಗಿ ಯೋಚಿಸ್ತಿದ್ದೀರಲ್ಲ? ಕೇವಲ basic needಗಳನ್ನೇ ಪೂರೈಸಿಕೊಂದು ಜೀವಿಸುತ್ತಿದ್ದ ಹಲವು ಕುಟುಂಬಗಳಿಗೆ ನಮಗೂ ಒಂದು ತಲೆಮೇಲೆ ನಮ್ಮದನ್ನೊ ಸೂರು ಬೇಕು ಅಂತ ಆಸೆಪಡೊದಷ್ಟೇಅಲ್ಲ, ಈಗ ಅವರು ಸೂರಿನಬಗ್ಗೆ ಯೋಚಿಸೋಹಾಗಿದೆ. ಅದು ನಿಮಗೆ ಕೆಟ್ಟದ್ದಾಗಿ ಕಾಣುತ್ತಿದ್ಯ?

ಬಜಾಜ್, ನೆಹರುಗಳ ಉದಾಹರಣೆ ಕೊಟ್ಟಿದ್ದೆರ ಈಗ, ಸ್ವಾಮಿ, ನೀವೇ ಹೆಳಿದಂತೆ, ಐಟಿ ಮುಂಚಾಣಿಗೆ ಬಂದು ಕೇವಲ ೧೭ ವರ್ಷ ಆಗಿದೆ. ೧೫ ವರ್ಷಗಳ ಹಿಂದೆ ನೀವು ಉದಾಹರಿಸಿರೋ ಶ್ರೀಮಂತರ ರೀತಿಯಿದ್ದ ಜನಗಳ ಹೆಸರು ಕೊಡಿ ಸ್ವಾಮಿ. ಯಾಕೆ? ಐವತ್ತು ವರ್ಷಗಳ ಹಿಂದೆ ಹೋದ್ರಿ?? ಹಾಗಂತ, ಈಗ ಯಾರೂ ಫಿಲಾಂಥ್ರಫಿ ಮಾಡ್ತಿಲ್ವ? ಅವರಲ್ಲಿ ಯಾರೂ ಐಟಿನವರಿಲ್ವ? ಅಥವ ನಿಮಗೆ ಉದಾಹರಿಸಕ್ಕೆ ಮನಸ್ಸಿಲ್ವ?

ಕೂಲಿಯವನು ಮೊಬೈಲ್ ತಗೊಂಡ್ರೆ ಐಟಿನವರೇನು ಮಾಡ್ತಾರೆ? ಐಟಿನವರು ಸಿಕ್ಕಸಿಕ್ಕ ಜನಗಳಿಗೆ ’ಮೊಬೈಲ್ ತಗೊಳಿ’ ಅಂತ ಹೇಳ್ಕೊಂಡು ಓಡಾಡ್ತಿದ್ರ? ನಿಜಕ್ಕೂ ಟೆಕ್ನೋಲಜಿ ಇವತ್ತು ಎಲ್ಲರಿಗೂ ಸಿಗೋಕೆ ಒಂಥರ ಐಟಿ ಕಾರಣವಾಗಿದೆ. ನನಗೆ ಈಗ್ಲೂ ಜ್ಞಾಪಕವಿದೆ, ಮೊದಲು ಮೊಬೈಲ್ ಶುರುವಾದಾಗ, ಇನ್ಕಮಿಂಗ್ ಕೂಡ ಆರು ರುಪಾಯಿ ಇತ್ತು! ಈಗ ಭಾರತದಲ್ಲಿ ಮಾತ್ರ ಇನ್ಕಮಿಂಗ್-ಗೆ ದುಡ್ಡಿಲ್ಲ! ಬೇರೆ ದೇಶಗಳಿಗೆ ಹೋಗಿ ನೋಡಿ..

ಇವತ್ತು ’ಈ ಐಟಿ ನವರಿಗೆ ಅನುಕಂಪ ತೋರಿಸೋರು ಯಾರೂ ಇಲ್ಲ’ ಅಂತ ಬರೆದಿದ್ದೀರ. ಅವರ ಹಣೇಬರಹ ಅಂತ ಬಿಡಿ. ನಿಮಗೇನು? ಅವರಿಂದ ಯಾರಿಗೂ ಯಾವ ಸಹಾಯವೂ ಆಗದಿದ್ದಲ್ಲಿ ಅವರ ಪರಿಸ್ಥಿತಿ ಬಗ್ಗೆ ನಿಮಗೇಕೆ ಇಷ್ಟು ಕಳಕಳಿ? ಜನಕ್ಕೆ ನಿಮ್ಮ ಮನೆ ನಮಗೆ ಬಿಡಿ ಅಂತ ಯಾರು ಕೇಳಿದ್ದು? ಜನಗಳೇ ದುಡ್ಡು ಮಾಡೋ ಎಲ್ಲಾವಿಧಾನಗಳನ್ನೂ ಹುಡುಕಿಕೊಂಡು ಐಟಿಜನಗಳನ್ನ ದೋಚುತ್ತಿರೋದು. ದುಡ್ಡು ಯಾರಿಗೆ ಬೇಡ? ಖರ್ಚು ಮಾಡದಿದ್ರೆ ಐಟಿಯವರು ಇನ್ನಷ್ಟು ಉಳಿಸಬಹುದಲ್ವ?

ಐಟಿಯವರ ಕೆಲಸದಿಂದ ಭಾರತಕ್ಕೆ ಯಾವುದೇ ಪೇಟೆಂಟ್ ಬಂದಿಲ್ಲ ನಿಜ. ಆದ್ರೆ ಹರಗಿನವರು ಈನೇನು ಮಾಡಿದ್ದಾರೆ? ನಮ್ಮ ಪುರಾತನ ಶಾಸ್ತ್ರಗಳನ್ನೆಲ್ಲ ಹೊರಗಿನವರಿಗೆ ಬಿಟ್ಟುಕೊಡಲು ಸಿದ್ಧರಿದ್ದಾರೆ. ಸ್ವಲ್ಪ ವರ್ಷಗಳ ಹಿನ್ದೆ ಓದಿದ ನೆನಪು, ವಾಸ್ತುಶಾಸ್ತ್ರನ ಜರ್ಮನಿಯವರು ನಮ್ಮದು ಅಂತ ರಿಜಿಸ್ಟರ್ ಮಾಡ್ಕೊಂಡ್ರಂತೆ. ಈಗ ’ಯೋಗ’ದ ಮಾತು ಕೇಳಿಬರುತ್ತಿದೆ. ಬೇರೆಯವರು ಅದರ ಮಹತ್ವ ಕಂಡುಕೊಂಡಮೇಲೆ ನಮ್ಮವರು ಎಚ್ಚೆತ್ತುಕೊಳ್ಳುತ್ತಿದ್ದರೆ. ಬೇರೆಯವರು ನಮ್ಮದು ಅಂತ ಹೇಳಿಕೊಳ್ಳೋತನಕ ಇವರೆಲ್ಲಿದ್ರು? :)

ಈಗಿನ ’ರೆಸೆಷನ್’ ಅನ್ನೋದು ಐಟಿಯದ್ದಲ್ಲ. ಬೇರೆ ಕ್ಷೇತ್ರದವರ ಅತಿಯಾಸೆಯಿಂದಾದದ್ದು. ಅಮೆರಿಕದ ಬ್ಯಾಂಕ್‍ಗಳನ್ನ ಬಯ್ಯಿರಿ. ಲೀಮನ್ ಬ್ರದರ್ಸ್ ದಿವಾಳಿಗೂ ಐಟಿನೇ ಕಾರಣನ? GM, Ford.. ಎಲ್ಲಾ ದುಡ್ಡಿಲ್ಲದಿರೋಕೂ ಐಟಿನೇ ಕಾರಣನ? ಎಲ್ಲಾವುದಕ್ಕೂ ಐಟಿ ಕಾರಣವಲ್ಲ.

ಜನಗಳಿಗೆ ಐಟಿನವರು ಏನು ಮಾಡುತ್ತಿದ್ದಾರೆ ಅಂತ ಗೊತ್ತಿಲ್ಲ ಅಂದ್ರಿ. ಇರಬಹುದು. ಯಾಕಂದ್ರೆ, ಐಟಿ ಅಂದ್ರೆ ಏನು? ಅದರಿಂದ ಆಗೋ ಪ್ರಯೋಜನಗಳೇನು ಅಂತ ಯಾರು ಹೇಳ್ತಿದ್ದಾರೆ? ಏಳನೇ ತರಗತಿವರೆಗೆ ಇಂಗ್ಲೀಷ್ ಓದೋದೇ ಬೇಡ ಅಂತ ಧರಣಿ ಕೂರ್ತಿರೊ ರಾಜಕಾರಣಿಗಳಿರೋವಾಗ, ಇನ್ನು ಸ್ಕೂಲ್ನಲ್ಲಿ ಕಂಪ್ಯುತರ್ ಮತ್ತೆ ಅದರ ಫಲಾಫಲಗಳನ್ನ ಯಾರು ಹೇಳ್ಕೊಡ್ತಾರೆ? ಐಟಿನವರು ಏನು ಮಾಡ್ತಿದ್ದಾರೆ ಅಂತನೇ ಗೊತ್ತಿಲ್ಲದಿರೋರು, ಅವರಿಂದ ಕೆಟದ್ದಾಗ್ತಿದೆ ಅಂತ ಹೇಗೆ ಹೇಳ್ತರೆ? ನಿಮ್ಮ ಲೇಖನ ಓದಿದ್ಮೇಲೆ ನನಗೆ ಅನ್ನಿಸ್ತಿದೆ ನಿಮಗೂ ಕೂಡ ಅದರ ಗಂಧವಿಲ್ಲ ಅಂತ! ನೀವು ಐಟಿಯವರನ್ನ ನಿಮ್ಮ ಈ ಲೇಖನದಲ್ಲಿ ಕೇವಲ ಹಣದಿಂದ ಅಳೆದಿದ್ದೀರಿ. ಅದನ್ನ ಬಿಟ್ಟು ಬೇರೆ ಯೋಚಿಸಿ ನೋಡಿ. ಜೊತೆಗೆ ನಿಮ್ಮ ಮನಸ್ಸಿನಲ್ಲಿ ಐಟಿಯವರ ಬಗ್ಗೆ ಕೇವಲ ಕೋಪವಷ್ಟೇ ಕಾಣುತ್ತಿದೆ. ಲೇಖನ ಐಟಿ ಅಂದ್ರೇನು ಅಂತ ಗೊತ್ತಿಲ್ಲ ದಿರೋರ್ಗೆ ಐಟಿಜವಗಳ ಬಗ್ಗೆ ಇನ್ನಷ್ಟು ವ್ಯರ್ಥ ಕೋಪಬರಿಸೋದ್ರಲ್ಲಿ ಯಶಸ್ವಿಯಾಗಬಹುದು. ನಿಮ್ಮ ಉದ್ದೇಶ ಕೂಡ ಅದೇ ಇರಬೇಕು ಅನ್ನಿಸ್ತಿದೆ. ಐಟಿ ಕ್ಷೇತ್ರದಲ್ಲಿರುವವರು ದುಂದುವೆಚ್ಚ ಮಾಡಿಲ್ಲ ಅಂತ ನಾನು ಹೇಳ್ತಿಲ್ಲ. ಆದ್ರೆ ಕೆಲವೇ ಅಂತ ಜನಗಳಿಂದ generalizeಮಾಡಿದ್ರೆ ತಪ್ಪಗುತ್ತಲ್ವ? ಎಷ್ಟೋ ಪತ್ರಿಕೆಗಳು, ಪತ್ರಕರ್ತರೇ ಇಲ್ಲ ಸಲ್ಲದ್ದನ್ನು ಬರೆದು ಜನಗಳನ್ನ ತಪ್ಪು ದಾರಿಗೆಳಿತಿದ್ದಾರೆ ಅಂತ ಕೂಡ ನಾನು ಪತ್ರಿಕೆಗಳಲ್ಲೆ ಓದಿದ್ದೇನೆ. ಹಾಗಂತ, ನೀನು ಕೂಡ ಅವರಲ್ಲಿ ಒಬ್ಬರು ಅಂತ ಹೇಲೋಕಾಗತ್ತ, ಕೇವಲ ನೀವೂ ಕೂಡ ಪತ್ರಿಕೆಗಳಲ್ಲಿ ಬರಿತೀರ ಅಂತ?

ಪ್ರತಾಪ ಸಿಂಹ ಅವರೆ, ನೀವು ಪ್ರಸಿದ್ಧ ಕೇಖನಕಾರು. ಪ್ರಭಾವಶಾಲಿಗಳೂ ಹೌದು. ನಿಮ್ಮ ಲೇಖನಕ್ಕೆ ಎಷ್ಟೋಮಂದಿ ಕಾಯ್ತಿರ್ತಾರೆ. ಅವರಿಗೆಲ್ಲ ನೀವು ಬರೆದದ್ದೇ ನಿಜ. ಅವರು ಮುಂದೆ ಯೋಚಿಸುವುದೇ ಇಲ್ಲ. ಹೀಗಿರುವಾಗ, ನೀವು ಹಿಂದೆ ಮುಂದೆ ಯೋಚಿಸದೆ ಐಟಿ ಜನಗಳ ಬಗ್ಗೆ ಹೇಗೆ ಹೀಗೆಲ್ಲಾ ಬರೆಯಬಹುದೆ? ಅದರಿಂದ ಜನಗಳ ಹುಚ್ಚು ಕಲ್ಪನೆಗಳಿಗೆ ದಾರಿಯಾಗಿ, ಅಮಾಯಕರಿಗೆ ತೊಂದರೆಯಾಗುತ್ತಲ್ವ? ನಿಮಗೆ ಸಾಧ್ಯವಾದರೆ ಐಟಿ ಅಂದರೆ ಏನು ಅಂತ ಲೇಖನ ಬರೆಯಿರಿ. ಅದರಬಗ್ಗೆ ಜನರಿಗೆ ತಿಳಿಹೇಳಿ ಆದ್ರೆ ’ಐಟಿಯವರೆಲ್ಲಾ ದುರಹಂಕಾರಿಗಳು’ ಅನ್ನೊ ಧೋರಣೆಯ ಮಾತು ಯಾಕೆ ಸರ್? ನೇವು ತುಂಬಾ ವಿಶಯ ತಿಳಿದಿದ್ದೇರಿ, ಜನಗಳಿಗೆ ಯೋಚಿಸುವಂಥಾ ಲೇಖನಗಳನ್ನ ಬರೀತೀರಿ ಅಂತೆಲ್ಲಾ ಅಂದುಕೊಂಡಿದ್ದ ನನಗೆ, ಈ ಲೇಖನ ಓದಿ ಎಲ್ಲಾ ತಪ್ಪು ಅನ್ನಿಸತೊಡಗಿದೆ. ನಿಮ್ಮಂಥಾ ಪ್ರಭಾವಿ ಲೇಖಕರು ಹೀಗೆ ಯಾರನ್ನೇಆಗಲಿ ಅನ್ನಬಹುದೆ? ಇಂಥಾ ಲೇಖನಗಳಿಂದ ಐಟಿಯವರ ಬಗ್ಗೆ ಕೆಲವು ಜನಗಳಿಗಿರೋ ಕೋಪಕ್ಕೆ ಇನ್ನಷ್ಟು ತುಪ್ಪ ಸುರಿದಂತಾಗುತ್ತಾಲ್ವ?

ನನಗನ್ನಿಸಿದ್ದನ್ನು ಹೇಳಬಯಸಿದೆ. ಅದನ್ನೇ ಇಲ್ಲಿ ಬರೆದಿದ್ದೇನೆ. ನಿಮಗೆ ಬೇಜಾರು ಪಡಿಸುವುದಕ್ಕಲ್ಲ. ನನ್ನ ಮಾತುಗಳು ನಿಮಗೆ ಬೇಜಾರುಮಾಡಿದ್ದರೆ, ದಯವಿಟ್ಟು ಕ್ಷಮಿಸಿ - ನಾನು ನಿಮ್ಮಷ್ಟು ದೊಡ್ಡವನಲ್ಲ. ಹಾಗೂ ನಿಮ್ಮಷ್ಟು ಜ್ಞಾನವೂ ಇಲ್ಲ ಅಥವ ನಿಮ್ಮೊಂದಿಗೆ ಜಗಳವಾಡೋ ಮನಸ್ಸೂ ಇಲ್ಲ. ಯಾವುದೇ ಒಂದು ಹೊಸದು ಬಂದಾಗ, ಅದರಿಂದ ಉಪಯೋಗಗಳು ಎಷ್ಟೇ ಇದ್ದರೂ, ಕೆಲವುಬಾರಿ ಋಣಾತ್ಮಕವಾಗಿಯೂ ಅದು ಕೆಲಸ ಮಾಡಿರಬಹುದು. ಆದರೆ, ಅದನ್ನು ಹೀಯಾಳಿಸದೆ, ಎಲ್ಲಾ ಋಣಾತ್ಮಕಗಳನ್ನ ಧನಾತ್ಮಕವಾಗಿ ಮಾಡೋಕೆ ಪ್ರಯತ್ನ ಮಾಡಬೇಕು ಅಲ್ವ, ಸರ್?

ನಿಜವಾಗಿ ಇದು ನಿಮ್ಮ article ಅಲ್ಲ!!

ಇಂತಿ,
ಶ್ರೀ