Sunday, November 12, 2006

ಬೆಂಗಳೂರಿನ ಪುಸ್ತಕ ಜಾತ್ರೆ

ಸುಮಾರು ಎರಡು ವರ್ಷಗಳ ನಂತರ ನಿನ್ನೆ ಶನಿವಾರ ನಾನು B.M.T.C. busನಲ್ಲಿ ಹೊರಟೆ. ಬೆಂಗಳೂರಿನ traffic problemಗಳಿಗೆ ಒಂದು ದಿನ ನನ್ನ ಕಾರು ಹೊರತಾಗಿದ್ದರೆ ಸ್ವಲ್ಪ ಮಟ್ಟಿಗಾದರೂ ಸಹಾಯವಾಗಬಹುದೇನೊ ಅನ್ನೊ ಒಂದೆ ಒಂದು ಆಸೆ ಹೊತ್ತಿದ್ದೆ. ಒಂದುಥರ ಅನುಭವ ಚೆನ್ನಗಿಯೇ ಇತ್ತು. ನಾನು ಬನ್ನೆರುಘಟ್ಟ ರಸ್ತೆಯಿಂದ ಮೇಖ್ರಿ ಸರ್ಕಲ್ ನಲ್ಲಿ ನಡೆಯುತ್ತಿದ್ದ book fairಗೆ ಹೋಗಬೆಕಿತ್ತು. ಬೆಳಗ್ಗೆ ದಿನಪತ್ರಿಕೆಯಲ್ಲಿ ಅದರ ಜಾಹಿರಾತು ನೋಡಿದಮೇಲೆ ತುಂಬಾ ಆಸೆಯಾಗಿತ್ತು. ನನಗೆ ಸ್ವಲ್ಪ ಪುಸ್ತಕಗಳ ಬಗ್ಗೆ ಆಸಕ್ತಿಯಿದೆ. ಆದರಲ್ಲೂ ಈಚೆಗೆ ಸ್ವಲ್ಪ ಜಾಸ್ತಿಯಾಗಿದೆ. ಸಿಕ್ಕ ಪುಸ್ತಕಗಳನ್ನೆಲ್ಲಾ ಕೊಂಡು ತರುತ್ತಿರುತ್ತೆನೆ... ನನ್ನ ಅರ್ಧಾಂಗಿ 'ಬರೇ ತರ್ತಿರ, ಅದನ್ನಲ್ಲ ಯಾವಾಗ ಓದುತ್ತಿರ; ನಿಮಗೆ ಸಮಯಯೆಲ್ಲಿದೆ? ಮೊದಲು ತಂದಿರೊ ಎಲ್ಲಾ ಪುಸ್ತಕ ಓದಿ ಮುಗಿಸಿ' ಅಂತ ರೇಗಿಸುತ್ತಿರುತ್ತಾಳೆ. ಆದರೂ ಪುಸ್ತಕ ತರೋಬುದ್ಧಿ ಹೋಗಿಲ್ಲ :(

ಸಂಜೆ ನಾಲ್ಕು ಗಂಟೆಗೆ ಮನೆಬಿಟ್ಟವ ನಾನು ಪುಸ್ತಕ ಜಾತ್ರೆ ನಡೀತಿದ್ದ ಜಾಗ ತಲುಪಿದಾಗ 5.50.. ಸ್ವಲ್ಪ ಸುದೀರ್ಘ ಪಯಣ.. ಒಂದೆ ಊರಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ... :) ಅದೆ ರಾತ್ರಿ ಮಾತ್ರ ಒಂದೇ ಗಂಟೆಯಲ್ಲಿ ಮನೆ ತಲುಪಿದ್ದೆ.

ಪುಸ್ತಕ ಜಾತ್ರೆ ಏನು ಸೊಗಸಾಗಿತ್ತು ಮಾರಾಯರೆ!!... ಬಹಳ ವರ್ಷಗಳ ನಂತರ ಅಷ್ಟೊಂದು ಪುಸ್ತಕಗಳನ್ನ ಒಂದೇ ಸೂರಿನಡಿ ನೊಡಿದ್ದು... ಕನ್ನಡ, ಇಂಗ್ಲಿಷ್, ತಮಿಳು, ಹಿಂದಿ ಎಲ್ಲಾ ಭಾಷೆಯದ್ದೂ ಅಂಗಡಿಗಳು ಇತ್ತು... ಆದರಲ್ಲೂ ನಾನು ನೋಡಲು ಹೋಗಿದ್ದು ಕನ್ನಡ ಪುಸ್ತಕಗಳನ್ನ.. ನಿಜವಾಗಲೂ ಸಂತೋಷವಾಯ್ತು, ಸ್ವಾಮಿ. ನನಗೆ ತಿಳಿದಿದ್ದ ಎಲ್ಲಾ ಪ್ರಕಾಷಕರದೂ ಒಂದೊಂದು ಅಂಗಡಿ ಇತ್ತು. ಬೇಕಾದಷ್ಟು ಕನ್ನಡ ಪುಸ್ತಕಗಳು ಇದ್ದವು. ಆಷ್ಟೊಂದು ಪುಸ್ತಕಗಳನ್ನ ನೋಡಿಯೇ ನನ್ನ ಹೊಟ್ಟೆ ತುಂಬಿತ್ತು. ಎಲಾ ಅಂಗಡಿಗಳನ್ನು ಸಾಧ್ಯವಾದಷ್ಟು scanಮಾಡಿದೆ. ತಕ್ಕಷ್ಟು ಕೊಂಡೆ. ಎಲ್ಲಾ ನೋಡುವಾಗ ನನ್ನ ಹಾಫ಼್ ಶರ್ಟ್ (ಅರ್ಥಾತ್ ಪತ್ನಿ) ನನ್ನ ಜೊತೆಇಲ್ಲವಲ್ಲ ಅನ್ನಿಸಿತು. ಇಷ್ಟೊಂದು ಕನ್ನಡ ಪುಸ್ತಕಗಳನ್ನೆಲ್ಲಾ ತೊರಿಸುವ ನನ್ನ ಹಂಬಲ ಆಗ ನನ್ನಲ್ಲಿಯೇ ಉಳೀತು.. ಆಗ ನನ್ನ ಸ್ನೆಹಿತ, cousin ಮತ್ತು ನನ್ನ ಸೊದರ ಮಾವನವರನ್ನೂ ತುಂಬಾ ಸ್ಮರಿಸಿದೆ. ಆವರೆಲ್ಲರಿಗೂ ಸ್ವಲ್ಪ ಪುಸ್ತಕಗಳ ಹುಚ್ಚು ಇದೆ. ಆವರಷ್ಟೆ ಅಲ್ಲ, ನನ್ನಮ್ಮನಿಗೂ ಇದೆ. ಆದೆ ನನಗೂ ಪುಸ್ತಕದ ಹುಚ್ಚುಹಿಡಿಸಿತೊ ಏನೊ! ಚಿಕ್ಕಂದಿನಿಂದನೊ ಅಮ್ಮ ಓದುತ್ತಿದ್ದುದು ನೊಡಿ ಜೊತೆಗೆ ನನ್ನ ಕೆಲವು ಸಹವರ್ತಿಗಳ ಒಡನಾಟ ನನಗೆ ಕನ್ನಡ ಪುಸ್ತಕಗಳ ಗೀಳನ್ನ ಇನ್ನೂ ಉಳಿಸಿದೆ.

ಮೊನ್ನೆ autoನಲ್ಲಿ ಬರುವಾಗ ನಮ್ಮ ಒಬ್ಬ ಸಹೃದಯಿ ಚಾಲಕ ಕನ್ನಡದ ಸ್ಥಿತಿಗತಿಗಳ ಬಗ್ಗೆ ಚರ್ಚೆ ಶುರುಮಾಡಿದ. ನಾನೂ ಕನ್ನಡದವನೇ ಆದ್ದರಿಂದ ಮಾತನಾಡಲು ಶುರುಮಾಡಿದೆ. 'ಬೇರೆಯವರನ್ನು ನೋಡಿ ಸರ್, ನಾವೆಲ್ಲ ಅವರ ಊರಿಗೆ ಹೋದ್ರೆ, ನಾವು ಅವರ ಭಾಷೆನೆ ಕಲಿತು ಮಾತಾಡೊಹಾಗೆ ಮಾಡುತ್ತರೆ. ಇಲ್ಲಿ ಮಾತ್ರ ಅವರೆಲ್ಲ ಯಾಕೆ ನಮ್ಮ ಭಾಷೆಕಲಿಯಲ್ಲ?' ಅಂತೆಲ್ಲಾ ಎಲ್ಲರೂ ಮಾತಾಡೊದೆಲ್ಲ ನಾವು ಮಾತಾಡಿದೆವು. ಹೌದು, ಸ್ವಾಮಿ. ನಾವು ಮೊದಲು, ಸರಿಹೋಗಬೇಕು. ಬೇರೆಯವರು ಇಲ್ಲಿ ನಮ್ಮ ಭಾಷೆ ಮಾತಡುತ್ತಿಲ್ಲ ಅಂತಷ್ಟೆ ನಾವು ಹೇಳುತ್ತಿರುತ್ತೆವೆ, ಆದರೆ, ನಮ್ಮಲ್ಲಿ ಎಷ್ಟು ಜನ ಕನ್ನಡೇತರ ಭಷೆಯಲ್ಲಿ ಮಾತಾಡಿದಾಗ, ಕನ್ನಡದಲ್ಲಿ ಉತ್ತರಕೊಟ್ಟಿದ್ದೆವೆ? ಅಥವಾ ಕನ್ನಡವನ್ನು ಅವರೆಲ್ಲಾ ಕಲಿಯಬೇಕು ಅನ್ನಿಸೋಹಾಗೆ ಅವರಿಗೆ ತಿಳಿಸಿದ್ದೆವೆ? ಆದೂ ಮುಖ್ಯವಲ್ಲವೆ, ಸ್ವಾಮಿ? ನಾವು ಯಾವಾಗಲೂ ಬೇರೆಯವರು ಕಲೀತಿಲ್ಲ ಅಂತಷ್ಟೇ ಹೇಳಿದರೆ ಸಾಕಾ??
ಒಂದು ಅಂಗಡಿಯಲ್ಲಿ englishಏ ಜೀವಾಳವೇನೊ ಅನ್ನೊಹಾಗೆ ಕಾಣುತ್ತಿದ್ದ ಒಂದಿಬ್ಬರು ಕನ್ನಡ ಪುಸ್ತಕಗಳನ್ನು ವಿಚಾರಿಸುತ್ತಿದ್ದುದ್ದು ತುಂಬಾ ಖುಶಿ ತಂತು. ಆಗ ಅನ್ನಿಸಿತು, 'ಕನ್ನಡವೇ ಸತ್ಯಾ??' ಅನ್ನೊ ಕೆಲವರ ಕೊಂಕಿನ ಪ್ರಶ್ನೆಗೆ ಉತ್ತರ ನಮ್ಮ ಹತ್ತಿರ ಇದೆ, ಬರೆಯ ಹಾಸ್ಯವಲ್ಲ, ಕನ್ನಡ ಇನ್ನೂ ಸತ್ತಿಲ್ಲ, ಎಲ್ಲರಲ್ಲೂ ತುಂಬಿದೆ ಅಂತ. ಅವರು ಎಲ್ಲರೂ ಕಷ್ಟ ಅಂತ ಬಿಡೊ ಭೈರಪ್ಪನವರ ಒಂದು ದೊಡ್ಡ ಪುಸ್ತಕ ತಗೊಂಡ್ರು..
ಅಲ್ಲಿ ನಾನು ಸ್ವಲ್ಪ ದಿನದಿಂದ ಹುಡುಕುತ್ತಿದ್ದ ಅ.ನ.ಕೃ. ಅವರ ಸಂಧ್ಯಾರಾಗ ನೋಡಿದೆ, ತಂದೆ. ಬೀchiಅವರ ಭಯಾಗ್ರಫಿಯಲ್ಲಿ ಅವರ conversionಗೆ ಕಾರಣವಾದ ಪುಸ್ತಕ ಅದು ಅಂತ ಓದಿದಾಗಿನೊಂದನೂ ಸಂಧ್ಯಾರಾಗ ಓದಬೇಕು ಅಂತ ಆಸೆ ಇತ್ತು. ಇವತ್ತು ಅದನ್ನ ಓದಿದೆ. ನಾಲ್ಕು ಗಂಟೆಗಳಲ್ಲಿ ಒಂದೇ ಸಾರಿಗೆ ಯಾವುದೇ ಬ್ರೇಕ್ ಇಲ್ಲದೆ ಓದಿದೆ. ಬೀchi ಹೇಳಿದಂತೆ, ಆ ಪುಸ್ತಕೆ ಯಾರಿಗಾದರೂ ಕನ್ನಡದ ದೀಕ್ಷೆಕೊಡಿಸುತ್ತದೆ. ಓದುವಾಗ ಹಲವು ಬಾರಿ ಕಣ್ಣು ತುಂಬಿಬರುವುದು ಸಹಜ. ಕನ್ನಡಪ್ರಿಯರೆಲರೂ ಓದಲೇಬೇಕು ಅಂತ ನಾನು ಹೇಳುತ್ತೇನೆ.
ಕನ್ನಡ ಅಷ್ಟಾಗಿ ಗೊತ್ತಿಲ್ಲದ ಮಕ್ಕಳಿಗೆ ಈ ಒಂದು ಪುಸ್ತಕ ಜಾತ್ರೆ ನಿಜಕ್ಕೂ ಒಳ್ಳೆಯ weekend trip. ಅಲ್ಪಸ್ವಲ್ಪ ಪ್ರೀತಿಯಿರುವ ಎಲ್ಲಾ ಕನ್ನಡ ತಂದೆ-ತಾಯಿಯರು ಮಕ್ಕಳಿಗೆ ಈ ಜಾತ್ರೆ ಮುಗಿಯೊಕ್ಮುಂಚೆ (೧೯ನವೆಂಬರ್ ಗೆ) ತೊರಿಸಿ ಕನ್ನಡದ ಪುಸ್ತಕಗಳ ಪರಿಚಯನಾದ್ರು ಮಾಡಿಸಬೆಕು ಅಲ್ಲವೆ? :)

2 comments:

Anonymous said...

BahaLa santoshavaaythu, taavu pustaka jaathrege hodaddu.

Nanage ee baari hogalu aagale illa. Taavu konDantaha pustakagaLannu dayamaaDi koDathakkaddu.

Guess who?

ಶ್ರೀ said...

ಧನ್ಯವಾದ. ಇದು ರಾಕೆಶ್ ಶರ್ಮ ಅವರೆ ಅಧವ ಶ್ರೇಯಸ್ ಮಾಧವರೆ? :)